Advertisement

ಗೌರವಧನ ಮುಂದುವರಿಸುವಂತೆ ಮನವಿ

06:06 PM Apr 24, 2020 | Naveen |

ಕುರುಗೋಡು: 2020 ಏಪ್ರಿಲ್‌-ಮೇ ಗೌರವಧನ ಮುಂದುವರಿಸುವಂತೆ ಪಟ್ಟಣ ಸಮೀಪದ ಎಮ್ಮಿಗನೂರು ಗ್ರಾಮದ ಅತಿಥಿ ಶಿಕ್ಷಕರು ಬುಧವಾರ ಮುಖ್ಯಮಂತ್ರಿಗಳಿಗೆ ಹಾಗೂ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ಅವರಿಗೆ ಪತ್ರ ಬರೆದು ಅಂಚೆ ಮೂಲಕ ಕಳುಹಿಸಿದರು.

Advertisement

ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕ ಎಸ್‌. ರಾಮು ಮಾತನಾಡಿ, ರಾಜ್ಯದ ಸರಕಾರಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 25000ಕ್ಕೂ ಹೆಚ್ಚು ಅತಿಥಿ ಶಿಕ್ಷಕರು 2019-20ನೇ ಸಾಲಿನ ಜುಲೈ ತಿಂಗಳಿಂದ ಮಾರ್ಚ್‌ 31 ರವರೆಗೆ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ಕರ್ತವ್ಯ ಬಿಡುಗಡೆಗೊಂಡಿದ್ದು, ಇದೇ ವೃತ್ತಿಯನ್ನು ನಂಬಿ ಜೀವನ ನಿರ್ವಹಣೆ ನಡೆಯುತ್ತಿತ್ತು. ಆದರೆ ಕೋವಿಡ್ ವೈರಸ್‌ ಭೀತಿ ಹಿನ್ನೆಲೆ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಯಾವುದೇ ಕೆಲಸವಿಲ್ಲದೆ ಆತಂತ್ರ ಸ್ಥಿತಿಯಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದೇವೆ. ಆದ್ದರಿಂದ ನಮ್ಮನ್ನು ಕಾರ್ಯನಿರತ ಅತಿಥಿ ಶಿಕ್ಷಕರೆಂದು ಪರಿಗಣಿಸಿ ಹಾಗೂ ಮಾನವೀಯ ದೃಷ್ಟಿಯಿಂದ ಗೌರವಧನ ಮುಂದುವರಿಸಿ ನಮ್ಮ ಬದುಕಿಗೆ ಆಸರೆಯಾಗಬೇಕು ಎಂದು ಪತ್ರದಲ್ಲಿ ಬರೆದು ಕಳುಹಿಸಲಾಗಿದೆ ಎಂದರು.

ಸಿ. ಮಲ್ಲಿಕಾ, ಶ್ರೀನಿವಾಸ, ಪಂಪಾಪತಿ, ನಾರಾಯಣ, ಲಲಿತಮ್ಮ, ಎಚ್‌.ಮಲ್ಲೇಶ್‌, ವೈ.ಧನುಂಜಯ್ಯ ರೆಡ್ಡಿ, ಶೇಖಣ್ಣ, ಸ್ವಾಮಿ, ಜಡೇಮ್ಮ, ಈರಮ್ಮ, ಜೆ.ಲೋಕೇಶ್‌, ವೆಂಕಟೇಶ್‌, ವೀರೇಶ್‌, ವಿಕ್ರಮ್‌, ಲೋಕೇಶ್‌,ಸಿ. ಹುಸೇನ್‌ ಸಾಬ್‌, ಮಾಬೂಸಾಬ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next