Advertisement

ಕುರುಗೋಡು : ಧಾರಾಕಾರ ಮಳೆ ಮನೆ ಕುಸಿತ, ಸೇತುವೆಗಳು ಜಾಲವೃತ, ಗದ್ದೆಗಳಿಗೆ ನುಗ್ಗಿದ ನೀರು

12:13 PM Aug 28, 2022 | Team Udayavani |

ಕುರುಗೋಡು : ಪಟ್ಟಣದ ಸುತ್ತಮುತ್ತ ಶನಿವಾರ ರಾತ್ರಿ 42.04 ಮೀ ಮೀ ಮಳೆಯಾಗಿದ್ದು, ರಾತ್ರಿಯಿಡಿ ಸುರಿದ ಮಳೆಯಿಂದ ಗುತ್ತಿಗನೂರು ಗ್ರಾಮದ ರೈತರಾದ ಚಾನಾಳ್ ಗುರುಸಿದ್ದಪ್ಪ, ದಮ್ಮೂರು ಮಲ್ಲಮ್ಮ ಗಂಡ ನಾಗನಗೌಡ, ಕೋಳೂರು ಬಡಿಗೇರ್ ಬಸವರಾಜ್ ಆಚಾರಿ ಸೇರಿ 3 ಮನೆಯ ಗೋಡೆಗಳು ಮತ್ತು ಮೆಲ್ಚಾವಣಿ ಸಂಪೂರ್ಣ ಕುಸಿದು ಬಿದ್ದಿವೆ ಯಾವುದೇ ಅಪಾಯ ಸಂಭವಿಸಿಲ್ಲ, ಇನ್ನೂ ಬಾದನಹಟ್ಟಿ ಮತ್ತು ಏರಂಗಳ್ಳಿ ಗ್ರಾಮಗಳ ಮಧ್ಯದಲ್ಲಿರುವ ಹಳ್ಳದ ಸೇತುವೆಯ ದಡ ಸೋಸಿ ಹರಿಯುತ್ತಿದ್ದು, ಅದರ ಪಕ್ಕದಲ್ಲಿ ನೂರಾರು ರೈತರು ಭತ್ತ ನಾಟಿ ಮಾದಿದ ಗದ್ದೆಗಳಿಗೆ ನೀರು ನುಗ್ಗಿ ಹರಿಯುತ್ತಿವೆ. ಇದರಿಂದ ರೈತರಿಗೆ ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ ಸಿದ್ದಮ್ಮನಹಳ್ಳಿ ಗ್ರಾಮದ ಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಕುಡುತೀನಿ, ಬಳ್ಳಾರಿ, ಸಂಡೂರು, ತೋರಣಗಲ್ಲು ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮಗಳಿಗೆ ತೆರಳುವ ಜನರು ಪರದಾಡುವಂತಾಗಿದೆ.

Advertisement

ಇನ್ನೂ ರುದ್ರಪಾದ ಗ್ರಾಮದ ಹಳ್ಳದ ಸೇತುವೆ ಮೇಲೆ ಎರಡು ದಿನದಿಂದ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ತುಂಬಾ ತೊದ್ರೆ ಆಗಿದೆ. ಅಲ್ಲದೆ ಈ ಸೇತುವೆ ಮೂಲಕ ಕಂಪ್ಲಿ ಮಾರ್ಗವಾಗಿ ಸಿರುಗುಪ್ಪ, ಸಿಂಧನೂರು, ರಾಯಚೂರು ಆದೋನಿ, ಕರ್ನುಲ್, ಸೇರಿದಂತೆ ವಿವಿಧ ಭಾಗದ ಜಿಲ್ಲೆ ಮತ್ತು ರಾಜ್ಯಗಳಿಗೆ ತೆರಳುವ ಜನರಿಗೆ ತುಂಬಾ ಅನುಕೂಲವಾದ ಮಾರ್ಗವಾಗಿದ್ದು, ಸದ್ಯ ಮಳೆಯಿಂದ ಸೇತುವೆ ಮುಳುಗಡೆ ಯಾದ ಪರಿಣಾಮ ದೂರದ ರಸ್ತೆಗಳ ಮೂಲಕ ಸುತ್ತಿಕೊಂಡು ಹೋಗಿ ಸಂಚಾರಿಸಬೇಕಾಗಿದೆ. ಇನ್ನೂ ನದಿ ಯಲ್ಲಿ ಮೊಸಳೆ ಹಾವಳಿಗಳ ಕಾಟ ತುಂಬಾ ಆಗಿದ್ದು ಮುಳಗಡೆಯಾದ ಸೇತುವೆ ಮೇಲಿಂದ ಸಂಚಾರಿಸಲು ಹರಸಾಹಸ ಪಡುತಿದ್ದು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸೇತುವೆ ಡಾಟಬೇಕಾಗಿದೆ. ಪ್ರತಿ ವರ್ಷ ಮಳೆ ಬಂದರೂ ಬಹುತೇಕ ಸೇತುವೆಗಳು ಮುಳುಗಡೆ ಆಗುತ್ತಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಸೇತುವೆ ದುರಸ್ತಿಗೆ ಮುಂದಾಗದೆ ಇರುವುದು ದುರಂತವಾಗಿದೆ.

ಪಟ್ಟಣದ ಸುತ್ತಮುತ್ತ ಬಹುತೇಕ ಸರಕಾರಿ ಶಾಲೆಗಳಿಗೆ ಕೂಡ ಮಳೆ ನೀರು ನುಗ್ಗಿ ಕೆಸರು ಗಡ್ಡೆಯಂತೆ ಮಾರ್ಪಟ್ಟಿವೆ.

ಕುಸಿದ ಮನೆಗಳಿಗೆ ಹಾಗೂ ಜಾಲವೃತ ಗೊಂಡ ರೈತರ ಜಮೀನುಗಳಿಗೆ ತಹಸೀಲ್ದಾರ್ ರಾಘವೇಂದ್ರ ರಾವ್, ಗ್ರೇಡ್ ತಹಸೀಲ್ದಾರ್ ಮಲ್ಲೇಶಪ್ಪ, ಗ್ರಾಮಲೆಕ್ಕಿಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ವರದಿಯನ್ನು ಸಂಗ್ರಹಿಸಿದ್ದು ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಾ ನಂತರ ಸರಕಾರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next