Advertisement

ಕೋವಿಡ್ ನಿಯಂತ್ರಿಸುವಲ್ಲಿ ವಿಫಲ

05:08 PM Jun 17, 2020 | Naveen |

ಕುರುಗೋಡು: ದೇಶದಲ್ಲಿ ಕೋವಿಡ್ ವೈರಸ್‌ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿದೆ ಎಂದು ಆರೋಪಿಸಿ ಸಿಪಿಐಎಂ ಸ್ಥಳೀಯ ಸಮಿತಿ ವತಿಯಿಂದ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಸಂಘದ ಮುಖಂಡ ಎನ್‌.ಸೋಮಪ್ಪ ಮಾತನಾಡಿ, ಭಾರತದಲ್ಲಿ ದಿನೇ ದಿನೇ ಕೋವಿಡ್ ವೈರಸ್‌ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಲಾಕ್‌ಡೌನ್‌ ವಿಚಾರದಲ್ಲಿ ತಗೆದುಕೊಂಡ ನಿರ್ಲಕ್ಷ್ಯದ ನಿರ್ಧಾರ. ಮೋದಿ ಸರ್ಕಾರದ ಆಡಳಿತ ವಿಫಲತೆಯೇ ಕಾರಣವಾಗಿದೆ ಎಂದು ದೂರಿದರು. ಮುಖಂಡ ಮಂಜುನಾಥ ಎನ್‌. ಹುಲ್ಲೇಪ್ಪ, ಯಂಕಮ್ಮ, ಕೇಂಚಪ್ಪ ಹಾಗೂ ಇನ್ನಿತರರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಮಲ್ಲೇಶಪ್ಪ ಮೇಲಧಿಕಾರಿಗಳಿಗೆ ಮನವಿ ಕಳುಹಿಸುವ ಭರವಸೆ ನೀಡಿದರು. ಪಟ್ಟಣ ಸಮೀಪದ ಬಾದನಹಟ್ಟಿ ಗ್ರಾಪಂ, ಎರ್ರಿಂಗಳಿಗಿ ಗ್ರಾಪಂ, ಸಿದ್ದಮ್ಮನಹಳ್ಳಿ ಗ್ರಾಪಂ, ಕಲ್ಲುಕಂಭ ಗ್ರಾಪಂಗಳ ವ್ಯಾಪ್ತಿಯಲ್ಲೂ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ವಿಎಸ್‌. ಶಿವಶಂಕರ್‌, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಳಿ ಬಸವರಾಜ್‌, ಯು. ಶಂಕ್ರಪ್ಪ, ಬಿ.ಮುಕ್ಕಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next