Advertisement

ಕುರುಗೋಡು: ನೆನಗುದಿಗೆ ಬಿದ್ದಿದ್ದ ಹೂಳು ಎತ್ತುವ ಕಾರ್ಯಕ್ಕೆ ಚಾಲನೆ!

02:42 PM Jun 10, 2022 | Team Udayavani |

ಕುರುಗೋಡು: ಸಮೀಪದ ಎಂ. ಸೂಗೂರು ಗ್ರಾಪಂ ವ್ಯಾಪ್ತಿಯ ಮಣ್ಣೂರು ಗ್ರಾಮದ 1ನೇ ವಾರ್ಡಿನ ಪರಿಶಿಷ್ಟ ಜಾತಿ ಕಾಲೋನಿ ಯ ಕೆಂಚಮ್ಮ ದೇವಸ್ಥಾನ ದಲ್ಲಿ ಬಹಳ ದಿನಗಳಿಂದ ಚರಂಡಿ ಬ್ಲಾಕ್ ಆಗಿ ಸುತ್ತ ಮುತ್ತ ಗಿಡ ಗಂಟೆಗಳು ಬೆಳದು ಹದೆಗೆಟ್ಟು ಹೋಗಿದ್ದು, ಚರಂಡಿ ನೀರು ಎಲ್ಲಂದರಲ್ಲಿ ಸಂಗ್ರಹ ಗೊಂಡು ರಸ್ತೆಯ ಮೇಲೆ ಹರಿಯುತ್ತಿವೆ.

Advertisement

ಈ ಬಗ್ಗೆ ಅನೇಕ ಬಾರಿ ಗ್ರಾಪಂ ಆಡಳಿತಕ್ಕೆ ತಿಳಿಸಿದರು ಇತ್ತಕಡೆ ಗಮನಹರಿಸದೆ ಮೌನ ವಹಿಸಲಾಗಿದೆ. ಇದರಿಂದ ಅಲ್ಲಿ ವಾಸಿಸುವ ಜನರಿಗೆ ನಿತ್ಯ ಅಂಗೈಯಲ್ಲಿ ಜೀವ ಹಿಡಿದುಕೊಂಡು ವಾಸಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಅಲ್ಲದೆ ಸಂಜೆ ವೇಳೆ ಸೊಳ್ಳೆಗಳ ಕಾಟ ಹೆಚ್ಚಾಗಿ ಅನೇಕ ರೋಗಕ್ಕೆ ತುತ್ತಾಗಬೇಕಾಗಿದೆ. ಇನ್ನೂ ವಿಷ ಜಂತುಗಳು ಮನೆ ಮಾಡಿವೆ. ಇದರಿಂದ ನಿತ್ಯ ಭಯದಲ್ಲಿ ಕಾಲ ಕಾಲಕಳೆಯಬೇಕಾಗಿದೆ. ಈ ಸಮಸ್ಯೆಗಳನ್ನು ಗ್ರಾಪಂ ಸದಸ್ಯೆ ಮುತ್ತಮ್ಮ, ಸೋಮಪ್ಪ ಛಲವಾದಿ ಅರಿತು ಗ್ರಾಪಂ ಆಡಳಿತಕ್ಕೆ ಒತ್ತಾಯ ಮಾಡಿ ಚರಂಡಿಯಲ್ಲಿ ಹೂಳು ಎತ್ತುವುದರ ಜೊತೆಗೆ ಸುತ್ತಮುತ್ತ ಸ್ವಚ್ಛತೆ ಕಾರ್ಯ ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಲ್ಲಿ ನೆರವಾಗಿದ್ದಾರೆ.

ಈ ಸಂದರ್ಭದಲ್ಲಿ ಸೋಮಪ್ಪ ಛಲವಾದಿ, ಖಾದರಲಿಂಗ, ಉಮೇಶ್, ಅಂಬರೇಶ್, ಸೇರಿದಂತೆ ಕೂಲಿ ಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next