Advertisement

Rajya Sabha; ಕಣದಲ್ಲೇ ಉಳಿದ ಕುಪೇಂದ್ರ ರೆಡ್ಡಿ; ಈಗ ಮೂರು ಪಕ್ಷಗಳಿಗೂ ಅಡ್ಡ ಮತ ಭೀತಿ

12:43 AM Feb 21, 2024 | Team Udayavani |

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆ. 27ರಂದು ನಡೆಯಲಿರುವ ಚುನಾವಣೆಗೆ ಅಂತಿಮವಾಗಿ ಐವರು ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವುದ ರಿಂದ ಈಗ ಈ ಚುನಾವಣೆ ಕುತೂಹಲ ಕಾರಿ ಘಟ್ಟ ತಲುಪಿದೆ.

Advertisement

ನಾಮಪತ್ರ ವಾಪಸ್‌ ಪಡೆಯಲು ಮಂಗಳವಾರ ಕಡೆಯ ದಿನವಾಗಿತ್ತು. ತಮ್ಮ ಗೆಲುವಿಗೆ 9 ಮತಗಳ ಕೊರತೆ ಎದುರಿ ಸುತ್ತಿರುವ ಎನ್‌ಡಿಎ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕೊನೆಘಳಿಗೆಯಲ್ಲಿ ನಾಮಪತ್ರ ವಾಪಸ್‌ ಪಡೆಯಬಹುದೆಂಬ ನಿರೀಕ್ಷೆ ಹುಸಿಯಾಗಿರುವು ದರಿಂದ ಈಗ ಕಾಂಗ್ರೆಸ್‌ನ ಮೂವರು ಅಧಿಕೃತ ಅಭ್ಯರ್ಥಿಗಳಲ್ಲಿ ನಡುಕ ಉಂಟಾಗಿದೆ.

ಕುಪೇಂದ್ರ ರೆಡ್ಡಿಗೆ ಬಿಜೆಪಿಯ ಹೆಚ್ಚುವರಿ 20 ಮತಗಳು ಹಾಗೂ ಜೆಡಿಎಸ್‌ನ 16 ಮತಗಳು ಚಲಾವಣೆಯಾಗಬಹುದೆಂಬ ಲೆಕ್ಕಾಚಾರವಿದ್ದು, ಅವರ ಗೆಲುವಿಗೆ ಇನ್ನೂ 9 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಈಗ ಕುತೂಹಲ. ಸಹಜವಾಗಿ ಅವರು ಕಾಂಗ್ರೆಸ್‌ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ನಡೆಸಿದಂತೆ ಕಾಣುತ್ತಿದೆ. ಜೆಡಿಎಸ್‌ನ ಅತೃಪ್ತರನ್ನು ಸೆಳೆಯಲು ಕಾಂಗ್ರೆಸ್‌ ಕೂಡ ಪ್ರತಿತಂತ್ರ ರೂಪಿಸುತ್ತಿದೆ.

ಕಣದಲ್ಲಿ ಕಾಂಗ್ರೆಸ್‌ನಿಂದ ಅಜಯ್‌ ಮಾಕೆನ್‌, ಜಿ.ಸಿ. ಚಂದ್ರಶೇಖರ್‌, ಡಾ| ನಾಸೀರ್‌ ಹುಸೇನ್‌ ಕಣದಲ್ಲಿದ್ದಾರೆ. ಕಾಂಗ್ರೆಸ್‌ನ ಎಲ್ಲ 136 ಮತಗಳು ಈ ಮೂವರಿಗೆ ಚಲಾವಣೆಯಾದರೆ ಆತಂಕ ಇಲ್ಲದೆ ಗೆಲುವಿನ ದಡ ಸೇರಲಿದ್ದಾರೆ. ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಸ್ಪರ್ಧಿಸಿದ್ದಾರೆ. ಒಂದು ವೇಳೆ ಅಡ್ಡ ಮತದಾನ ವಾದರೆ ಲೆಕ್ಕಾಚಾರ ಬುಡಮೇಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next