Advertisement

Kunigal: ಪ್ರತ್ಯೇಕ ಘಟನೆ; ಇಬ್ಬರು ಸಾವು

09:08 AM Jun 02, 2024 | Team Udayavani |

ಕುಣಿಗಲ್: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಅಮೃತ್ತೂರು ಹಾಗೂ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

Advertisement

ತಾಲೂಕಿನ‌ ಹುಲಿಯೂರುದುರ್ಗ ಹೋಬಳಿ ಹುಲಿಕಟ್ಟೆ ಗ್ರಾಮದ ಅವಿನಾಶ್ (27), ಎಡಿಯೂರು ಹೋಬಳಿ ತುವ್ವೆಕೆರೆ ಗ್ರಾಮದ ನಿವಾಸಿ ಮನವಳಯ್ಯ (40) ಪ್ರತ್ಯೇಕ ಪ್ರಕರಣದಲ್ಲಿ ಮೃತಪಟ್ಟ ದುರ್ದೈವಿಗಳು.

ವಿದ್ಯುತ್ ಸ್ಪರ್ಶ ಸಾವು : ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹುಲಿಕಟ್ಟೆ ಗ್ರಾಮದ ಅವಿನಾಶ್ ತಮ್ಮ ಜಮೀನಿನಲ್ಲಿರುವ ರೇಷ್ಮೆ ಹುಳುವಿನ ಮನೆ ಸ್ವಚ್ಛಗೊಳಿಸಲು ಮೋಟರ್ ಆನ್ ಮಾಡುವ ವೇಳೆ ಅವರಿಗೆ ವಿದ್ಯುತ್ ಸ್ಪರ್ಶಿಸಿದೆ ಎನ್ನಲಾಗಿದೆ. ವಿದ್ಯುತ್ ಅವಘಡದಿಂದ  ಗಾಯಗೊಂಡಿದ್ದ ಅವಿನಾಶ್ ನನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತೆರೆದ ಬಾವಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು: ತಾಲೂಕಿನ ಎಡಿಯೂರು ಹೋಬಳಿ ತುವ್ವೆಕೆರೆ ಗ್ರಾಮದ ಮನವಳಯ್ಯ ಎಮ್ಮೆ ಮೇಯಿಸಲು ಜಮೀನಿಗೆ ಹೋಗಿದ್ದ ವೇಳೆ ನೀರು ಕುಡಿಯಲು ತೆರೆದ ಬಾವಿ ಬಳಿಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

Advertisement

ಮೃತ ದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿಗಳು ಹೊರ ತೆಗೆದಿದ್ದಾರೆ. ಅಮೃತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next