Advertisement

Kunigal; ಟ್ರ್ಯಾಕ್ಟರ್ ಚಾಲಕನ ಎಡವಟ್ಟು: ಬೈಕ್ ಸವಾರ ಸಾವು,ಇಬ್ಬರಿಗೆ ಗಾಯ

08:42 PM Jun 02, 2024 | Team Udayavani |

ಕುಣಿಗಲ್ : ಬೈಕೊಂದು ಟ್ರ್ಯಾಕ್ಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಕುಳಿತಿದ್ದ ಮಗು ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೭೫ ರ ಬಿ.ಎಂ ರಸ್ತೆ ಅಲಪ್ಪನಗುಡ್ಡೆ ಸೇತುವೆ ಬಳಿ ಭಾನುವಾರ ಸಂಭವಿಸಿದೆ. ಅವಘಡಕ್ಕೆ ಟ್ರ್ಯಾಕ್ಟರ್ ಚಾಲಕ ಮಾಡಿದ ಎಡವಟ್ಟೆ ಕಾರಣ ಎನ್ನಲಾಗಿದೆ.

Advertisement

ಮೂಲತಃ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಆಲೇನಹಳ್ಳಿ ಗ್ರಾಮ ಹಾಲಿ ಬೆಂಗಳೂರು ಉಲ್ಲಾಳ ವಾರ್ಡ್ ಭುವನೇಶ್ವರಿ ನಗರದ ಇಂಟಿರಿಯಲ್ ಫೀಲ್ಡ್ ಕೆಲಸಗಾರ ಪಿ.ಯತೀಶ್‌ಗೌಡ (25) ಮೃತ ಯುವಕನಾಗಿದ್ದು. ಆತನ ಅಕ್ಕ ಪೂಜಾ, ಅಕ್ಕನ ಮಗ ದೇವಪ್ರಯಾಗೌಡ (5) ಗಾಯಗೊಂಡು ಅಂದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಕ್‌ನಲ್ಲಿ ಯತೀಶ್‌ ತನ್ನ ಅಕ್ಕ ಮತ್ತು ಅಕ್ಕನ ಮಗನನ್ನು ಕೂರಿಸಿಕೊಂಡು ಬೆಂಗಳೂರಿನಿಂದ ತಮ್ಮ ಸ್ವಗ್ರಾಮ ಆಲೇನಹಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ಟ್ರ್ಯಾಕ್ಟರ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಒಡಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಹಿಂದೆ ಬರುತ್ತಿದ್ದ ಬೈಕ್ ಟ್ರ್ಯಾಕ್ಟರ್ ಗೆ ಢಿಕ್ಕಿ ಹೊಡೆದು ಅವಘಡ ನಡೆದಿದೆ ಎನ್ನಲಾಗಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next