Advertisement

ದೇವರ ದರ್ಶನ ಮುಗಿಸಿ ಬರುತ್ತಿದ್ದ ವೇಳೆ ಕಾರು ಪಲ್ಟಿ : ಎರಡುವರೆ ತಿಂಗಳ ಮಗು ಸ್ಥಳದಲ್ಲೇ ಸಾವು

04:34 PM Jul 09, 2022 | Team Udayavani |

ಕುಣಿಗಲ್ : ಚಾಲಕನ ನಿಯಂತ್ರಣ ತಪ್ಪಿ, ಕಾರು ಪಲ್ಟಿಯಾದ ಪರಿಣಾಮ ಎರಡುವರೆ ತಿಂಗಳ ಮಗು ಮೃತಪಟ್ಟು ಮಗುವಿನ ತಂದೆ, ತಾಯಿ ಗಾಯಗೊಂಡಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಬಿ.ಎಂ ರಸ್ತೆ ನಾಗೇಗೌನಪಾಳ್ಯ ಗೇಟ್ ಬಳಿ ಶನಿವಾರ ಸಂಬವಿಸಿದೆ.

Advertisement

ಮಾಗಡಿ ತಾಲೂಕು ಕುದೂರು ಹೋಬಳಿ ನಾರಸಂದ್ರ ಗ್ರಾಮದ ಎರಡುವರೆ ತಿಂಗಳ ಸಮರ್ಥ ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮಗುವಿನ ತಾಯಿ ರಮ್ಯ ಹಾಗೂ ತಂದೆ ಪರಮೇಶ್ ಗಾಯಗೊಂಡಿದ್ದಾರೆ.

ಘಟನೆ ವಿವರ : ಪರಮೇಶ್ ತನ್ನ ಹೆಂಡತಿ ರಮ್ಯ ಹಾಗೂ ಮಗು ಸಮರ್ಥನೊಂದಿಗೆ ತನ್ನ ಗ್ರಾಮದಿಂದ ಕಾರಿನಲ್ಲಿ ಕುಣಿಗಲ್ ತಾಲೂಕಿನ‌ ಎಡಿಯೂರಿಗೆ ಹೋಗಿ ಸಿದ್ದಲಿಂಗಸ್ವಾಮಿ ಸ್ವಾಮಿಗೆ ಪೂಜೆ ಸಲ್ಲಿಸಿ ತನ್ನ ಗ್ರಾಮಕ್ಕೆ ಹಿಂತಿರುಗುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ, ಗಾಯಗೊಂಡ ರಮ್ಯ ಹಾಗೂ ಪರಮೇಶ್ ಅವರಿಗೆ ಕುಣಿಗಲ್ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : 4.46 ಕೋಟಿ ರೂ.ದುರುಪಯೋಗ: ಪಿಇಎಸ್‌ ಕಾಲೇಜು ಸಿಬ್ಬಂದಿ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next