Advertisement

Kunigal News: ಪ್ರತ್ಯೇಕ ರಸ್ತೆ ಅಪಘಾತ…ಇಬ್ಬರು ಮೃತ್ಯು, ಮತ್ತಿಬ್ಬರಿಗೆ ಗಾಯ

09:59 PM Apr 05, 2023 | Team Udayavani |

ಕುಣಿಗಲ್ : ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

Advertisement

ತುಮಕೂರು ತಾಲೂಕು ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮದ ಎನ್.ಆರ್.ಗೋವಿಂದರಾಜು (23) ಹಾಗೂ ಮೂಲತಃ ಬೆಂಗಳೂರು ವಾಸಿ ಹಾಲಿ ಕುಣಿಗಲ್ ತಾಲೂಕು ಕೊತ್ತಗೆರೆ ಹೋಬಳಿ ತೆರೆದಕುಪ್ಪೆಯ ಕೊಪ್ಪಲುಭಾರೆ ಗ್ರಾಮದ ಗಂಗಶಾನಯ್ಯ (42) ಮೃತ ದುರ್ದೈವಿಗಳು.

ಪ್ರಕರಣ 1: ಗಂಗಶಾನಯ್ಯ ಕೆಲಸದ ನಿಮಿತ್ತ ಮಂಗಳವಾರ ಕುಣಿಗಲ್ ಪಟ್ಟಣಕ್ಕೆ ಬಂದು ಬೈಕ್‌ನಲ್ಲಿ ತನ್ನ ಗ್ರಾಮ ತೆರೆದಕುಪ್ಪೆಯ ಕೊಪ್ಪಲುಭಾರೆ ಗ್ರಾಮಕ್ಕೆ ವಾಪಸ್ಸ್ ಆಗುತ್ತಿದ್ದ ವೇಳೆ ಕೊತ್ತಗೆರೆ ಪಾಳ್ಯ ಬಳಿ ಹೆಬ್ಬೂರು ಕಡೆಯಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಪರಿಣಾಮ ಗಂಗಶಾನಯ್ಯ ತೀವ್ರವಾಗಿ ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಗಂಗಶಾನಯ್ಯ ಮೃತಪಟ್ಟಿದ್ದಾರೆ.

ಪ್ರಕರಣ 2 : ಮತ್ತೊಂದು ಘಟನೆಯಲ್ಲಿ ಎನ್.ಆರ್.ಗೋವಿಂದರಾಜು ಬೈಕ್‌ನಲ್ಲಿ ತುಮಕೂರು ತಾಲೂಕು ಹೆಬ್ಬೂರು ಹೋಬಳಿ ನಿಡುವಳಲು ಗ್ರಾಮದಿಂದ ಜಿಮ್‌ಗೆ ಕುಣಿಗಲ್ ಪಟ್ಟಣಕ್ಕೆ ಬರುತ್ತಿರಬೇಕಾದರೆ, ಬಾಗೇನಹಳ್ಳಿ ಗೇಟ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಕಾರಣ ಗೋವಿಂದರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಈ ಘಟನೆಯಲ್ಲಿ ಜಗದೀಶ್, ಅಭಿಲಾಷ್‌ಗೆ ತೀವ್ರವಾದ ಗಾಯವಾಗಿದ್ದು, ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಎರಡು ಪ್ರಕರಣಗಳು ಕುಣಿಗಲ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Apple BKC: ಮುಂಬೈನಲ್ಲಿ ದೇಶದ ಮೊದಲ ಆಪಲ್‌ ಸ್ಟೋರ್‌ ಆರಂಭ

Advertisement
Advertisement

Udayavani is now on Telegram. Click here to join our channel and stay updated with the latest news.

Next