Advertisement

Kunigal ಪೊಲೀಸ್ ದಾಳಿ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ

07:05 PM Sep 13, 2023 | Team Udayavani |

ಕುಣಿಗಲ್ : ಪಟ್ಟಣದ ಹೊರ ವಲಯದ ಚಿಕ್ಕಕೆರೆ ಏರಿಯ ಉದ್ಯಾನವನ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ ಕುಣಿಗಲ್ ಪೊಲೀಸರು, ನಗದು ಸೇರಿದಂತೆ ಒಣ ಗಾಂಜಾ ವಶ ಪಡಿಸಿಕೊಂಡು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ತಾಲೂಕಿನ ದೊಡ್ಡಮಾವತ್ತೂರು ಗ್ರಾಮದ ಗಿರೀಶ್, ಟಿ.ಹೊಸಹಳ್ಳಿ ಗ್ರಾಮದ ನಾಗರಾಜು ಸೇರಿದಂತೆ ಮೂರು ಮಂದಿ ಬಂಧಿತ ಆರೋಪಿಗಳು. ರಾಜ್ಯ ಹೆದ್ದಾರಿ 33 ರ ಟಿ.ಎಂ ರಸ್ತೆ ಚಿಕ್ಕಕೆರೆ ಏರಿಯ ಪಾರ್ಕ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕುಣಿಗಲ್ ಸಿಪಿಐ ನವೀನ್‌ಗೌಡ ಅವರ ನೇತೃತ್ವದ ಪೊಲೀಸ್ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ72 ಗ್ರಾಂ ಒಣ ಗಾಂಜಾ 9 ಪ್ಯಾಕೇಟ್ ಹಾಗೂ ಎರಡು ಸಾವಿರ ರೂ ನಗದನ್ನು ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ವೃತ್ತ ನಿರೀಕ್ಷಕ ನವೀನ್‌ಗೌಡ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next