Advertisement

Kunigal;ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: ಏಳು ಮಂದಿ ಬಂಧನ

10:55 PM Jun 22, 2024 | Team Udayavani |

ಕುಣಿಗಲ್: ಜೂಜು ಅಡ್ಡೆ ಮೇಲೆ ಕುಣಿಗಲ್ ಪೊಲೀಸರು ದಾಳಿ ನಡೆಸಿ ಏಳು ಮಂದಿ ಆರೋಪಿಗಳನ್ನು ಬಂಧಿಸಿ ಪಣಕ್ಕೆ ಇಟ್ಟಿದ್ದ ನಗದು ಹಣವನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕು ಹುತ್ರಿದುರ್ಗ ಹೋಬಳಿ ಹುಣ್ಣಸೇಕುಪ್ಪೆ ತಾಂಡ್ಯದಲ್ಲಿ ಶನಿವಾರ ನಡೆದಿದೆ.

Advertisement

ತಾಲೂಕಿನ ಎಡೆಹಳ್ಳಿ ಗ್ರಾಮದ ನಾಗೇಶ್, ಪ್ರಕಾಶ್, ಶರಣ್, ನಾಗನಹಳ್ಳಿ ಗ್ರಾಮದ ಪ್ರಭುಲಿಂಗಯ್ಯ, ಸೊಂದಲಗೆರೆ ಗ್ರಾಮದ ರಾಕೇಶ್, ಗುಳ್ಳಹಳ್ಳಿಪುರ ಗ್ರಾಮದ ಕೃಷ್ಣಕುಮಾರ್, ಕೆಂಪನಹಳ್ಳಿ ಗ್ರಾಮದ ಪ್ರಕಾಶ್ ಬಂಧಿತ ಆರೋಪಿಗಳು.

ಹುಣ್ಣಸೇಕುಪ್ಪೆ ತಾಂಡ್ಯದಲ್ಲಿ ಜೂಜು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕುಣಿಗಲ್ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಎಸ್.ಬಿ.ನವೀನ್‌ಗೌಡ, ಪಿಎಸ್‌ಐ ಕೃಷ್ಣಕುಮಾರ್ ನೇತೃತ್ವದ ತಂಡ ದಾಳಿ ನಡೆಸಿತ್ತು, ಜೂಜಾಟದಲ್ಲಿ ತೊಡಗಿದ ಏಳೂ ಮಂದಿ ಆರೋಪಿಗಳನ್ನು ಬಂಧಿಸಿ ಪಣಕ್ಕೆ ಇಟ್ಟಿದ ನಗದು 22.475 ರೂಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next