Advertisement

ಕುಣಿಗಲ್ : ಹಾಡಹಗಲೇ ವ್ಯಕ್ತಿಯ ಮೇಲೆ ಲಾಂಗ್‌ನಿಂದ ಹಲ್ಲೆ

11:29 PM Aug 03, 2023 | Team Udayavani |

ಕುಣಿಗಲ್ : ಹಳೇ ದ್ವೇಷ ಹಿನ್ನಲೆಯಲ್ಲಿ ಗುಪೊಂದು ಲಾಂಗಿನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಡಹಗಲೇ ಪಟ್ಟಣದ ಮಲ್ಲಾಘಟ್ಟ ಎಲ್‌ಐಸಿ ಆಫೀಸ್ ಮುಂಭಾಗದಲ್ಲಿ ಗುರುವಾರ ನಡೆದಿದೆ.

Advertisement

ತಾಲೂಕಿನ ಮೇಸ್ತ್ರಿಗೌಡನಪಾಳ್ಯ ಗ್ರಾಮದ ಜಗದೀಶ್ ಅಲಿಯಾಸ್ ಜಗ ಲಾಂಗ್ ನಿಂದ ಹಲ್ಲೆಗೆ ಒಳಗಾದ ವ್ಯಕ್ತಿ. ಗುರುವಾರ ಮಧ್ಯಾಹ್ನ ಸುಮಾರು 3.45 ರ ಸಮಯದಲ್ಲಿ ಕುಣಿಗಲ್ ಪಟ್ಟಣದ ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ ರಸ್ತೆ ಮಲ್ಲಾಘಟ್ಟದ ಎಲ್.ಐ.ಸಿ ಆಫೀಸ್ ಮುಂಭಾಗದಲ್ಲಿ ಎಸ್.ಕೆ.ಎನ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪ ಜಗದೀಶ್, ಆತನ ಸ್ನೇಹಿತ ರೇಣುಕಾ ಕುಣಿಗಲ್ ಕಡೆಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಬೈಕ್‌ಗಳಲ್ಲಿ ಬಂದ ಕೂತರಹಳ್ಳಿ ಗ್ರಾಮದ ಆಕಾಶ್, ಹುಚ್ಚಲಕ್ಕಯ್ಯನಪಾಳ್ಯದ ಗ್ರಾಮದ ಚಿಕ್ಕಣ್ಣ, ಕುಣಿಗಲ್ ಪಟ್ಟಣದ ಆಶ್ರಯ ಕಾಲೋನಿಯ ಶ್ರೀನಿವಾಸ್ (ಸೀನ) ಮತ್ತು ಇತರೇ ಇಬ್ಬರು ಸೇರಿ ಏಕಾಏಕಿ ಅವಾಚ್ಯವಾದ ಶಬ್ದಗಳಿಂದ ಬೈದು, ಲಾಂಗ್ ನಿಂದ ಜಗದೀಶನ ತೊಡೆಯ ಮೇಲೆ ಹೊಡೆಯಲಾಗಿದೆ.

ಜಗದೀಶ ಕೆಳಗೆ ಬಿದ್ದಾಗ ಮತ್ತೆ ಆಕಾಶ ಲಾಂಗ್ ನಿಂದ ಜಗದೀಶನ ತಲೆಗೆ ಹೊಡೆದಿದ್ದಾನೆ ಎಂದು ರೇಣುಕಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಘಟನಾ ಸ್ಥಳಕ್ಕೆ ಜನರು ಬರುತ್ತಿದಂತೆ ಆರೋಪಿಗಳು ಪರಾರಿಯಾಗಿದ್ದಾರೆ, ತೀವ್ರವಾಗಿ ಗಾಯಗೊಂಡ ಜಗದೀಶನನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದ್ಯೋಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next