Advertisement

Kunigal: ಮದುವೆ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ

10:43 AM Dec 21, 2023 | Team Udayavani |

ಕುಣಿಗಲ್: ಇನ್ನೂ ಓದಬೇಕೆಂದು ಬಯಸಿದ್ದ ವಿದ್ಯಾರ್ಥಿನಿಗೆ ಮದುವೆ ಮಾಡಿಸಿದ್ದಕ್ಕೆ ಮನನೊಂದು ಆಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಮೃತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಯಡ್ಡಿಗೆರೆ ಗ್ರಾಮದಲ್ಲಿ ಡಿ.20ರ ಬುಧವಾರ ನಡೆದಿದೆ.

Advertisement

ತಾಲೂಕಿನ ಎಡಿಯೂರು ಹೋಬಳಿ ಸಿಡಿಲುಹಟ್ಟಿ ಗ್ರಾಮದ ನಿವಾಸಿ ಜಿ.ಟಿ.ರಕ್ಷಿತಾ (19) ಮೃತ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.

ಘಟನೆಯ ವಿವರ: ರಕ್ಷಿತಾ ಕುಣಿಗಲ್ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಕಳೆದ ನ.31 ರಂದು ರಕ್ಷಿತಾ ತಾಯಿ ತನ್ನ ತಮ್ಮ ಸಂತೋಷನೊಂದಿಗೆ ರಕ್ಷಿತಾಳನ್ನು ಮದುವೆ ಮಾಡಿದರು.

ಆದರೆ ರಕ್ಷಿತಾ, ನಾನು ಇನ್ನೂ ಓದಬೇಕಾಗಿತ್ತು. ನನಗೆ ಮದುವೆ ಮಾಡಿಸಿದ್ದೀರ ಎಂದು ತಿಳಿಸುತ್ತಿದ್ದಳು ಎನ್ನಲಾಗಿದ್ದು, ಮತ್ತೊಂದು ಮಾಹಿತಿ ಪ್ರಕಾರ ರಕ್ಷಿತಾ ಆನಾರೋಗ್ಯದಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಮಂಗಳವಾರ ರಕ್ಷಿತಾ ಮನೆಯಿಂದ ಹೊರ ಹೋದವಳು ಮತ್ತೆ ಮನೆಗೆ ವಾಪಸ್ಸಾಗಲಿಲ್ಲ. ಪೋಷಕರು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಬಳಿಕ ಬುಧವಾರ ಯಡ್ಡಿಗೆರೆ ಕೆರೆಯಲ್ಲಿ ರಕ್ಷಿತಾ ಶವ ಪತ್ತೆಯಾಗಿದೆ.

ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next