Advertisement

ಕುಂದಾಪುರ: ಕೊಲೆ ಪ್ರಕರಣ; ಆರೋಪಿಗಳಿಬ್ಬರಿಗೆ ಜಾಮೀನು

12:58 AM Dec 24, 2022 | Team Udayavani |

ಕುಂದಾಪುರ: ಹಂಗಳೂರು ಗ್ರಾಮದ ನೇರಂಬಳ್ಳಿಯ ವಿನಯ್‌ ಪೂಜಾರಿ ಅವರನ್ನು ಕಳೆದ ಮಾ. 28ರಂದು ಕತ್ತು ಹಿಸುಕಿ ಕೊಲೆ ಮಾಡಿ, ವಾರಾಹಿ ನದಿಗೆ ಎಸೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡನೇ ಆರೋಪಿ ಪ್ರವೀಣ್‌ ಪೂಜಾರಿ ಹಾಗೂ ಮೂರನೇ ಆರೋಪಿ ಸತೀಶ್‌ ಪೂಜಾರಿಗೆ ಜಾಮೀನು ಮಂಜೂರು ಮಾಡಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

Advertisement

ಮಾ. 23ರಂದು ವಿನಯ್‌ ನಾಪತ್ತೆಯಾಗಿದ್ದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎ. 4ರಂದು ಅಂಪಾರು ಗ್ರಾಮದ ಹಡಾಳಿ ಬಳಿಯ ವಾರಾಹಿಯಲ್ಲಿ ವಿನಯ್‌ ಮೃತದೇಹ ಪತ್ತೆಯಾಗಿದ್ದು, ಶಂಕರನಾರಾಯಣ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿತ್ತು. ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂದರೆ 6 ತಿಂಗಳ ಅನಂತರ ಕೊಲೆ ಪ್ರಕರಣವಾಗಿ ದಾಖಲಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳಾದ ಅಕ್ಷಯ್‌, ಪ್ರವೀಣ್‌ ಪೂಜಾರಿ ಹಾಗೂ ಸತೀಶ್‌ ಪೂಜಾರಿಯನ್ನು ಬಂಧಿಸಲಾಗಿತ್ತು. ಆರೋಪಿಗಳ ಪರ ಕುಂದಾಪುರದ ಯುವ ನ್ಯಾಯವಾದಿ ಪಿ. ಜಯಚಂದ್ರ ಶೆಟ್ಟಿ ವಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next