Advertisement

ವಾರದ ಸಂತೆ: ಖರೀದಿಗೆ ಮುಗಿ ಬಿದ್ದ ಜನ

09:46 PM Mar 28, 2020 | Sriram |

ಕುಂದಾಪುರ: ಕೋವಿಡ್‌ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ ನಡೆಯುತ್ತಿದ್ದ ಕುಂದಾಪುರದ ವಾರದ ಸಂತೆಯನ್ನು ರದ್ದುಪಡಿಸಲಾಗಿದೆ. ಆದರೂ ಶನಿವಾರ ವ್ಯಾಪಾರಿಗಳು 2-3 ವಾಹನಗಳಲ್ಲಿ ಹಣ್ಣು – ತರಕಾರಿಗಳನ್ನು ತುಂಬಿಕೊಂಡು ಬಂದಿದ್ದು, ಇದನ್ನು ತಿಳಿದ ಜನ ಸಂತೆ ಮಾರುಕಟ್ಟೆಯ ಹೊರಗಡೆ ಬೆಳ್ಳಂಬೆಳಗ್ಗೆ ಖರೀದಿಗೆ ಮುಗಿ ಬಿದ್ದ ಪ್ರಸಂಗ ನಡೆಯಿತು. ಸುದ್ದಿ ತಿಳಿದ ಪೊಲೀಸರು ಗುಂಪು – ಗುಂಪಾಗಿ ಖರೀದಿಸುತ್ತಿದ್ದ ಜನರನ್ನು ಚದುರಿಸಿದರು. ಬಳಿಕ ಎಪಿಎಂಸಿ ಅಧ್ಯಕ್ಷ ಶರತ್‌ ಕುಮಾರ್‌ ಶೆಟ್ಟಿ, ಅಧಿಕಾರಿಗಳು ಭೇಟಿ ನೀಡಿ, ಸರಕಾರದ ಆದೇಶದಂತೆ ಗ್ರಾಹಕರಿಗೆ ಖರೀದಿಗೆ ಅವಕಾಶವಿಲ್ಲ, ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ಮಾತ್ರ ಖರೀದಿಸಲು ಅವಕಾಶ ನೀಡಲಾಗಿದೆ ಎಂದು ಮನವರಿಕೆ ಮಾಡಿದ್ದಾರೆ. ಇಲ್ಲಿಯೂ ಕೂಡ ಖರೀದಿಗೆ ಸಾಮಾಜಿಕ ಅಂತರಕ್ಕಾಗಿ ಅಲ್ಲಲ್ಲಿ ವೃತ್ತಗಳನ್ನು ಹಾಕಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next