Advertisement

Kundapura: ಎರಡು ಪ್ರತ್ಯೇಕ ಆತ್ಮಹ*ತ್ಯೆ ಪ್ರಕರಣ

06:30 PM Oct 16, 2024 | Team Udayavani |

ನೇಣು ಬಿಗಿದು ಆತ್ಮಹತ್ಯೆ
ಕುಂದಾಪುರ: ಕಂದಾವರ ಗ್ರಾಮದ ನವೀನ ಡಿಸೋಜಾ (42) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು ತಾಯಿ ಪಾರ್ಶ್ವವಾಯು ಖಾಯಿಲೆಗೆ ಬಿದ್ದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿ ಅದೇ ಚಿಂತೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪ್ರಕರಣ ದಾಖಲಾಗಿದೆ.

Advertisement

ಕೆರೆಗೆ ಹಾರಿ ವೃದ್ಧೆ ಆತ್ಮಹತ್ಯೆ
ಕುಂದಾಪುರ: ಬಸ್ರೂರು ಗ್ರಾಮದ ಕಲ್ಯಾಣಿ (82) ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹೊಟ್ಟೆ ನೋವು ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದು ಇದೇ ನೋವಿನಿಂದ ಜೀವನದಲ್ಲಿ ಜುಗುಪ್ಸೆ ಹೊಂದಿ ಮನೆಯಿಂದ 500 ಮೀ. ದೂರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಅವರ ಪುತ್ರ ಭಾಸ್ಕರ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next