Advertisement

ಚಾಲಕನ ನಿರ್ಲಕ್ಷ್ಯದ ಚಾಲನೆ…ಡಾಬಾಕ್ಕೆ ನುಗ್ಗಿದ ಟಿಪ್ಪರ್‌: ಗ್ರಾಹಕ ಗಂಭೀರ

12:27 AM Feb 21, 2023 | Team Udayavani |

ಕುಂದಾಪುರ: ಟಿಪ್ಪರ್‌ ಡಾಬಾಕ್ಕೆ ನುಗ್ಗಿದ ಪರಿಣಾಮ ಗ್ರಾಹಕರೊಬ್ಬರಿಗೆ ಗಂಭೀರವಾಗಿ ಗಾಯವಾದ ಘಟನೆ ಮಾವಿನಕಟ್ಟೆ ಕ್ರಾಸ್‌ ಬಳಿ ಸೋಮವಾರ ನಡೆದಿದೆ.

Advertisement

ಮಾವಿನಕಟ್ಟೆಯ ಸರ್ಕಲ್‌ ಬಳಿಯಿದ್ದ ಮಹಮ್ಮದ್‌ ಹನೀಫ್ ಮಾಲಕತ್ವದ ಸ್ವೀಕಾರ್‌ ಫ್ಯಾಮಿಲಿ ಡಾಬಾದೊಳಗೆ ಕುಂದಾಪುರದಿಂದ ಗುಲ್ವಾಡಿಯತ್ತ ಆವೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ ಏಕಾಏಕಿ ನುಗ್ಗಿದೆ. ಈ ವೇಳೆ ಡಾಬಾದಲ್ಲಿದ್ದ ಹನೀಫ್ ಹಾಗೂ ಅವರ ಮಗ ನಿಜಾಮುದ್ದೀನ್‌ ಪಾರಾಗಿದ್ದು, ಗ್ರಾಹಕ ಅಬಿದ್ದಿನ್‌ ಅವರಿಗೆ ಗಂಭೀರ ಗಾಯಗಳಾಗಿದೆ. ಚಾಲಕನ ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಅಪಘಾತದಿಂದ ಹೊಟೇಲ್‌ ಒಳಗಿದ್ದ ಸಾಮಗ್ರಿಗಳು ಜಖಂ ಗೊಂಡಿದ್ದು 3 ಲಕ್ಷ ರೂ. ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next