Advertisement

Kundapura: ರಿಕ್ಷಾದಲ್ಲಿ ಬಂದು ಗೋ ಕಳ್ಳತನ

11:37 PM Sep 29, 2024 | Team Udayavani |

ಕುಂದಾಪುರ: ಗುಲ್ವಾಡಿ ಗ್ರಾಮದ ಸವಿತಾ ಅವರ ಮನೆಯ ದನಗಳನ್ನು ಕಳವುಗೈದ ಕುರಿತು ಪ್ರಕರಣ ದಾಖಲಾಗಿದೆ.

Advertisement

ಮೇಯಲು ಮನೆಯ ಪಕ್ಕದಲ್ಲಿರುವ ಹಾಡಿಗೆ ಬಿಟ್ಟಿದ್ದು ಸೊಪ್ಪು ತರಲು ಹೋಗುತ್ತಿರುವಾಗ ಯಾರೋ 4 ಜನ ಸವಿತಾ ಅವರ ದನವನ್ನು ಎಳೆದು ತಂದು ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ರಿಕ್ಷಾಕ್ಕೆ ತುಂಬುತ್ತಿರುವುದು ಕಂಡಿದೆ. ಬೊಬ್ಬೆ ಹಾಕುತ್ತಾ ರಿಕ್ಷಾದ ಬಳಿಗೆ ಓಡಿದಾಗ 4 ಜನರೂ ದನದೊಂದಿಗೆ ರಿಕ್ಷಾದಲ್ಲೇ ಪರಾರಿಯಾಗಿದ್ದಾರೆ.

ರಿಕ್ಷಾದಲ್ಲಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕೊಂಡೊಯ್ದ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next