Advertisement

Kundapura ಕೆರೆಕಟ್ಟೆ: ಪಲ್ಟಿಯಾಗಿ ಹೊಂಡಕ್ಕೆ ಬಿದ್ದ ಕಾರು

12:07 AM Sep 18, 2023 | Team Udayavani |

ಕುಂದಾಪುರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿಯಾಗಿ, ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದ ಘಟನೆ ರವಿವಾರ ಬೆಳಗ್ಗಿನ 3 ಗಂಟೆ ಸುಮಾರಿಗೆ ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಹೊಸಂಗಡಿ ಸಮೀಪದ ಕೆರೆಕಟ್ಟೆ ಎಂಬಲ್ಲಿ ಸಂಭವಿಸಿದೆ.

Advertisement

ಕಾರಿನ ಚಾಲಕ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಸಿದ್ದಾಪುರದಿಂದ ಹೊಸಂಗಡಿ ಕಡೆಗೆ ಬರುತ್ತಿದ್ದಾಗ ಈ ಅವಘಢ ಸಂಭವಿಸಿದೆ.

ಬಳಿಕ ಬೇರೊಂದು ವಾಹನದ ಮೂಲಕ, ಸ್ಥಳೀಯರ ಸಹಾಯದಿಂದ ಕಾರನ್ನು ಹೊಂಡದಿಂದ ಮೇಲೆತ್ತಲಾಯಿತು.

ಗುಂಡಿಮಯ ರಸ್ತೆ
ಕಾರು ಪಲ್ಟಿಯಾಗಿದ್ದಕ್ಕೆ ರಸ್ತೆಯಲ್ಲಿನ ಗುಂಡಿಗಳೇ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಿದ್ದಾಪುರ- ಹೊಸಂಗಡಿ ರಾಜ್ಯ ಹೆದ್ದಾರಿಯ ಕೆರೆಕಟ್ಟೆಯಿಂದ ಹೊಸಂಗಡಿಯವರೆಗಿನ ರಸ್ತೆಯ ಹಲವೆಡೆಗಳಲ್ಲಿ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಸಂಚಾರವೇ ದುಸ್ತರಗೊಂಡಿದೆ. ಈ ಬಗ್ಗೆ ಸ್ಥಳೀಯಾಡಳಿಗಳಾಗಲಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಗಮನವೇ ಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಈ ರಸ್ತೆಯ ಹೊಂಡ ಗುಂಡಿಗಳಿಂದ ಕಳೆದ ಕೆಲ ಸಮಯಗಳಿಂದ ಹಲವರು ಗುಂಡಿಗಳಿಂದಾಗಿ ಬಿದ್ದ ನಿದರ್ಶನವೂ ಇದೆ. ಇದರಿಂದ ಕೆಲ ದಿನಗಳ ಹಿಂದೆ ಪೊಲೀಸರೇ ಗುಂಡಿಗಳನ್ನು ತಾತ್ಕಲಿಕವಾಗಿ ತೇಪೆ ಹಾಕಲು ಮುಂದಾಗಿದ್ದರು. ಮಳೆಯಿಂದಾಗಿ ಈಗ ಮತ್ತೆ ಗುಂಡಿಗಳು ಕಾಣಿಸಿಕೊಂಡಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next