Advertisement

Kundapura ಹಳ್ನಾಡು: ಬಾವಿಗೆ ಬಿದ್ದು ವ್ಯಕ್ತಿ ಸಾವು

12:02 AM Sep 12, 2023 | Team Udayavani |

ಕುಂದಾಪುರ: ತೋಟದಲ್ಲಿ ಅಡಿಕೆ ಹಾಗೂ ತೆಂಗಿನ ಕಾಯಿ ಹೆಕ್ಕಲೆಂದು ಹೋಗಿದ್ದ ಕಾವ್ರಾಡಿ ಗ್ರಾಮದ ಹಳ್ನಾಡಿನ ನಿವಾಸಿ ಕನಕ ಬಿ. ಹೆಗ್ಡೆ (78) ಅವರು ಆವರಣದಲ್ಲಿರುವ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೆ.11ರಂದು ಬೆಳಗ್ಗೆ 8.30 ರ ಸುಮಾರಿಗೆ ಬೆಳಕಿಗೆ ಬಂದಿದೆ.

Advertisement

ಪುತ್ರ ಬಿ. ಮಂದಾರ್‌ದಾಸ್‌ ಹೆಗ್ಡೆ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀದಿದೀಪಕ್ಕೆ ಬೊಲೆರೋ ಢಿಕ್ಕಿ
ಕುಂದಾಪುರ: ಬೊಲೆರೋ ವಾಹನ ಬೀದಿ ದೀಪಕ್ಕೆ ಢಿಕ್ಕಿ ಹೊಡೆದ ಘಟನೆ ಉಡುಪಿ – ಕುಂದಾಪುರ ಹೆದ್ದಾರಿಯ ಹಂಗಳೂರು ಬಳಿ ಸೆ.11ರ ಬೆಳಗ್ಗೆ 6.30ರ ಸುಮಾರಿಗೆ ಸಂಭವಿಸಿದ್ದು, ಚಾಲಕ ಯಾಕೂಬ್‌ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next