Advertisement

ಸಚಿವರು ಆದೇಶಿಸಿದ ಆರು ಗಂಟೆಯೊಳಗೆ ರಸ್ತೆ ದುರಸ್ಥಿ: ಸಾರ್ವಜನಿಕರಿಂದ ಶ್ಲಾಘನೆ

06:22 PM Aug 09, 2020 | keerthan |

ಉಡುಪಿ: ಇಲ್ಲಿನ ಕುಂದಾಪುರದ ಫ್ಲೈ ಓವರ್ ಬಳಿಯ ರಸ್ತೆ ದರುಸ್ಥಿಯು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಆದೇಶಿಸಿದ ಕೇವಲ ಆರು ಗಂಟೆಯಲ್ಲಿ ಪೂರ್ಣವಾಗಿದೆ.

Advertisement

ಶನಿವಾರ ಮಧ್ಯಾಹ್ನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕುಂದಾಪುರದಿಂದ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಬಸ್ರೂರು ಫ್ಲೈಓವರ್ ಬಳಿ ಪ್ರತಿಭಟನಾಕಾರರು ತಡೆದು ರಸ್ತೆ ಪರಿಸ್ಥಿತಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಕೂಡಲೇ ಉಡುಪಿ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದ್ದ ಸಚಿವರು ತುರ್ತಾಗಿ ರಸ್ತೆ ಕಾಮಗಾರಿ ಮಾಡುವಂತೆ ಆದೇಶಿಸಿದ್ದರು.

ಸಚಿವರ ಆದೇಶದ ಹಿನ್ನಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ತುರ್ತಾಗಿ ರಸ್ತೆ ರಿಪೇರಿ ಮಾಡಿಸಿದೆ. ಕೆಲ ಸಮಯದಿಂದ ನೆನೆಗುದಿಗೆ ಬಿದ್ದದ್ದ ಕಾಮಗಾರಿಯನ್ನು ಸಚಿವರ ಕೆಲವೇ ಗಂಟೆಯಲ್ಲಿ ಮಾಡಿಸಿದ್ದು, ಸಚಿವರು ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next