Advertisement

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

04:57 PM Sep 19, 2024 | Team Udayavani |

ಕುಂದಾಪುರ: ಖಾಸಗಿ ಬಸ್‌ಗಳ ಪೈಪೋಟಿಯಿಂದಾಗಿ ಅವುಗಳ ಮಧ್ಯೆ ಸಿಕ್ಕ ಬಸ್ಸಿನ ನಿರ್ವಾಹಕ ಗಾಯಗೊಂಡ ಘಟನೆ ಸೆ.17ರ ಸಂಜೆ 6 ಗಂಟೆ ಸುಮಾರಿಗೆ ಹೆಮ್ಮಾಡಿಯಲ್ಲಿ ಸಂಭವಿಸಿದೆ.

Advertisement

ಖಾಸಗಿ ಬಸ್ಸಿನ ನಿರ್ವಾಹಕ ಶಿವಪ್ರಸಾದ್‌ ಗಾಯಗೊಂಡವರು. ಎದೆಗೆ, ಪಕ್ಕೆಲುಬುಗಳಿಗೆ ಗುದ್ದಿದ ಗಾಯ, ದೇಹದ ಹಲವೆಡೆ ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಮ್ಮಾಡಿ ಜಂಕ್ಷನ್‌ನಲ್ಲಿ ಕೊಲ್ಲೂರು ಕಡೆಯಿಂದ ಬಂದ ಖಾಸಗಿ ಬಸ್ಸನ್ನು ಚಾಲಕ ಮಂಜುನಾಥ್‌ ಅವರು ಪ್ರಯಾಣಿಕರು ಇಳಿಸಲು ನಿಲ್ಲಿಸಿದ್ದು, ಅದೇ ದಾರಿಯಲ್ಲಿ ಹಿಂದಿನಿಂದ ಬಂದ ಇನ್ನೊಂದು ಖಾಸಗಿ ಬಸ್ಸಿನ ಚಾಲಕ ಶಶಿ ಎಂಬುವರು ವೇಗವಾಗಿ ಬಂದು ಈ ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಿದ್ದಾರೆ. ಈ ವೇಳೆ ಬಸ್ಸಿನಿಂದ ಇಳಿಯಲು ಮೊದಲು ಬಂದ ಬಸ್ಸಿನ ನಿರ್ವಾಹಕ ಶಿವಪ್ರಸಾದ್‌ ಅವರು ಈ ಬಸ್‌ಗಳೆರಡರ ಮಧ್ಯೆ ಸಿಕ್ಕಿಹಾಕಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next