Advertisement

Kundapura: ಕಾರಿನ ಜತೆಗೆ ಚಿನ್ನ, ದಾಖಲೆ ಅಪಹರಣ: ದೂರು ದಾಖಲು

06:54 PM Oct 27, 2023 | Team Udayavani |

ಕುಂದಾಪುರ: ಕಾರಿನಲ್ಲಿದ್ದ ಚಿನ್ನ, ಹಣ, ದಾಖಲೆಗಳನ್ನು ತಂಡವೊಂದು ನೋಡ ನೋಡುತ್ತಿದ್ದಂತೆಯೇ ಅಪಹರಿಸಿದೆ ಎಂದು ದೂರೊಂದು ದಾಖಲಾಗಿದೆ.

Advertisement

ರಾಮಕೃಷ್ಣ ಕುಂದಾಪುರ ಅವರು ಜು. 31ರಂದು ಕಾರಿನಲ್ಲಿ ಬಂದಿದ್ದು, ಕಾರಿನ ಒಳಗಡೆ ಚಿನ್ನ ಮತ್ತು ವ್ಯವಹಾರದ ಹಣ ಇತ್ತು. ಕಾರನ್ನು ನಿಲ್ಲಿಸಿ ಹೊಟೇಲ್‌ ಒಳಗೆ ಹೋದಾಗ 3-4 ಕಾರುಗಳಲ್ಲಿ ಬಂದ 30ರಷ್ಟು ಜನ ಕಾರನ್ನು ಸುತ್ತುವರಿದಿದ್ದು, ರಾಮಕೃಷ್ಣರು ಕಾರಿನಲ್ಲಿದ್ದ ತಮ್ಮ ಸೊತ್ತುಗಳನ್ನು ತಗೆದುಕೊಳ್ಳಲು ಪ್ರಯತ್ನಿಸಿದಾಗ ಆರೋಪಿಗಳಾದ ಸುಕೇಶ, ಅಶೋಕ, ಅರುಣ, ಇಂತಿಯಾಜ್‌ ಅವರು ಕಾರಿನ ಸಾಲ ಬಾಕಿ ಇದೆ ಎಂದು ಬೈದು ಹಲ್ಲೆಗೆ ಯತ್ನಿಸಿ ಕಾರಿನೊಂದಿಗೆ ಚಿನ್ನ, ಹಣ ಹಾಗೂ ದಾಖಲೆಗಳನ್ನು ಅಪಹರಿಸಿಕೊಂಡು ಹೋಗಿದ್ದಾಗಿ ನ್ಯಾಯಾಲಯದಲ್ಲಿ ದಾಖಲಿಸಿದ ಖಾಸಗಿ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಈಗ ಪ್ರಕರಣ ದಾಖಲಾಗಿದೆ.

ಕಾರು-ಬೈಕ್‌ ಢಿಕ್ಕಿ; ಗಾಯ
ಕುಂದಾಪುರ: ತಲ್ಲೂರು ಜಂಕ್ಷನ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು-ಬೈಕ್‌ ಢಿಕ್ಕಿಯಾಗಿದೆ.

ಕುಂದಾಪುರ ಕಡೆಯಿಂದ ತಲ್ಲೂರು ಕಡೆಗೆ ಹೋಗುತ್ತಿದ್ದ ಕಾರು ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕುಂದಾಪುರದ ಪ್ರಥ್ವಿ (25) ಅವರ ಬೈಕ್‌ಗೆ ಢಿಕ್ಕಿಯಾಗಿದೆ.

ಸವಾರ, ಸಹಸವಾರನಿಗೆ ಗಾಯಗಳಾಗಿದ್ದು, ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next