Advertisement

ಕೋಣಿ; ಮಲಗಿದಲ್ಲೇ ಯುವಕ ಸಾವು

10:02 AM Mar 01, 2022 | Team Udayavani |

ಕುಂದಾಪುರ, ಫೆ. 28: ಯುವಕನೋರ್ವ ಮಲಗಿದಲ್ಲೇ ಸಾವನ್ನಪ್ಪಿದ ಘಟನೆ ಫೆ. 27ರಂದು ಕೋಣಿಯಲ್ಲಿ ಸಂಭವಿಸಿದೆ. ಕೋಣಿಯ ನಿವಾಸಿ ರಘು ಪೂಜಾರಿ ಅವರ ಪುತ್ರ ಶ್ರೀನಿವಾಸ (31) ಸಾವನ್ನಪ್ಪಿದ ಯುವಕ.

Advertisement

ಶ್ರೀನಿವಾಸ ಅವರು ಎಂಬಿಎ ಪದವೀಧರರಾಗಿದ್ದು, ಕಳೆದ 2 ವರ್ಷಗಳಿಂದ ಮನೆಯಿಂದಲೇ ಕೆಲಸ ಮಾಡಿಕೊಂಡಿದ್ದರು. ಫೆ. 27ರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅಣ್ಣ ಮಂಜುನಾಥ ಅವರು ಮನೆಗೆ ಬಂದಾಗ ಶ್ರೀನಿವಾಸ ಮಲಗಿಕೊಂಡಿದ್ದರು. ಎಬ್ಬಿಸಲು ಹೋದಾಗ ಮಾತನಾಡದೇ ಇದ್ದು, ದೇಹ ತಣ್ಣಗಾಗಿತ್ತು.

ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಶ್ರೀನಿವಾಸ ಅವರು ಯಾವುದೋ ಆರೋಗ್ಯ ಸಮಸ್ಯೆ ಅಥವಾ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ. ಮಂಜುನಾಥ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಣಸೆ ಮರದಿಂದ ಬಿದ್ದು ಸಾವು
ಕುಂದಾಪುರ, ಫೆ. 28: ಕನ್ಯಾನ ಗ್ರಾಮದ ಎಣ್ಣೆಬಾಳು ಕೂಡ್ಲು ಬಳಿಯ ನಿವಾಸಿ ಚಂದ್ರ ಪೂಜಾರಿ (26) ಅವರು ಫೆ.27ರಂದು ಹುಣಸೆ ಮರದಿಂದ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಾರೆ.

ಫೆ. 27ರ ಬೆಳಗ್ಗೆ 10.15ರ ಸುಮಾರಿಗೆ ಮನೆ ಸಮೀಪದ ಹುಣಸೆ ಮರಕ್ಕೆ ಹುಣಸೆ ಕಾಯಿ ಕೊಯ್ಯಲು ಹತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ರಿಕ್ಷಾದಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಸಾವನ್ನಪ್ಪಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next