Advertisement

Kundapura ಸ್ಫೋಟ: 2 ಮನೆಗೆ ಹಾನಿ; ಪ್ರಕರಣ ದಾಖಲು

12:41 AM Feb 24, 2024 | Team Udayavani |

ಕುಂದಾಪುರ: ಪಕ್ಕದ ಮನೆಯವರು ತೋಟದಲ್ಲಿ ಕಾಮಗಾರಿ ನಡೆಸುತ್ತಿದ್ದಾಗ ಅನಧಿಕೃತ ಸ್ಫೋಟಗೊಂಡು 2 ಮನೆಗಳಿಗೆ ಹಾನಿಯಾಗಿದೆ ಎಂದು ಬಸ್ರೂರಿನ ಶಶಿಕಾಂತ್‌ ಹಾಗೂ ಆನಂದ್‌ ದೂರು ನೀಡಿದ್ದಾರೆ.

Advertisement

ಅವರ ಮನೆಯ 100 ಮೀ.ಗಿಂತಲೂ ಕಡಿಮೆ ಅಂತರದಲ್ಲಿ ಸೂರ್ಯ ನಾರಾಯಣ ಅವರ ಮನೆ ಹಾಗೂ ತೋಟವಿದ್ದು, ಅಲ್ಲಿ ಕಾಮಗಾರಿ ನಡೆಯುತ್ತಿದೆ. ಆ ಸಂದರ್ಭ ಜೋರಾಗಿ ಸ್ಫೋಟ ಸಂಭವಿಸಿದ್ದು, ನಮ್ಮ ಹಾಗೂ ನೆರೆಮನೆಯ ಆನಂದ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ ಎಂದು ತಿಳಿಸಿದ್ದಾರೆ.

ಸೂರ್ಯನಾರಾಯಣ ಅವರು 20 ಆಡಿ ಆಳದಲ್ಲಿ ಮಣ್ಣು ತೆಗೆಸುತ್ತಿರುವಾಗ ಸಿಕ್ಕ ಬಂಡೆಕಲ್ಲುಗಳನ್ನು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಸ್ಫೋಟಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next