Advertisement

ಕುಂದಾಪುರ: ರಿಕ್ಷಾ ಚಾಲಕರಿಂದ ಬೃಹತ್‌ ಪ್ರತಿಭಟನೆ

09:22 PM Sep 25, 2019 | Team Udayavani |

ಕುಂದಾಪುರ: ದುಬಾರಿ ದಂಡ, ಕೇಂದ್ರ ಮೋಟಾರ್‌ ವಾಹನ ಕಾಯ್ದೆಗೆ ತಿದ್ದುಪಡಿ ವಾಸಪಾತಿ, ಆಟೋ ಚಾಲಕರಿಗೆ ಕಲ್ಯಾಣ ಯೋಜನೆ ಪ್ರಕಟಿಸಬೇಕು, ಅವ್ಯವಸ್ಥೆಯ ಆಗರವಾಗಿರುವ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೊಳಿಸಬೇಕು, ಶಾಸಿŒ ಸರ್ಕಲ್‌ ಫ್ಲೈಓವರ್‌ ಪೂರ್ಣಗೊಳಿಸಬೇಕು ಎಂದು ಆಗ್ರ ಹಿಸಿ ಇಲ್ಲಿನ ಆಟೋ ಚಾಲಕರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಶಾಸಿŒ ಸರ್ಕಲ್‌ನಿಂದ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ತೆರಳಿ ಅಲ್ಲಿ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ
ದುಬಾರಿ ದಂಡ, ಕೇಂದ್ರ ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ 2019ನ್ನು ಹಿಂಪಡೆಯಬೇಕು. 15 ವರ್ಷಕ್ಕಿಂತ ಹಳೆಯ ಅಟೋಗಳನ್ನು ರದ್ದುಪಡಿಸುತ್ತಿದ್ದು ಹಳೆ ಆಟೋಗಳಿಗೆ ಕಂಪೆನಿಗಳಿಂದ ದರ ನಿಗದಿಪಡಿಸಬೇಕು. ಸರಕಾರ ಪ್ರೋತ್ಸಾಹಧನ ವಾಗಿ 50 ಸಾವಿರ ರೂ. ನೀಡಬೇಕು. ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡಬೇಕು. ಆಟೋ ಚಾಲಕರಿಗೆ ಮನೆ, ಕಾಲನಿ ನಿರ್ಮಿಸಿಕೊಡಬೇಕು. ವಾಹನಗಳ ವಿಮಾ ಪ್ರೀಮಿಯಂ ದರ ಹೆಚ್ಚಳವನ್ನು ನಿಯಂತ್ರಿಸಬೇಕು. ಅಸಂಘಟಿತ ಕಾರ್ಮಿಕರಾದ ಅಟೋ ಚಾಲಕರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಜಾರಿಗೊಳಿಸಬೇಕು, ಪಿಂಚಣಿ ಯೋಜನೆ ಜಾರಿಗೊಳಿಸಬೇಕು.

ಅಸಂಘಟಿತ ಕಾರ್ಮಿಕರ ಕಲ್ಯಾಣ ಭದ್ರತಾ ಮಂಡಳಿ ರಚಿಸಬೇಕು, ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಬೇಕು. ಅಟೋ ಚಾಲಕರ ಕುಟುಂಬಕ್ಕೆ ಇಎಸ್‌ಐ ಸೌಲಭ್ಯ ಜಾರಿಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕು. ಹೊಂಡಗಳನ್ನು ಮುಚ್ಚಬೇಕು. ಶಾಸಿŒ ಸರ್ಕಲ್‌ ಫ್ಲೈಓವರ್‌ ಕಾಮಗಾರಿ ಬೇಗನೇ ಮುಗಿಸಬೇಕು ಮೊದಲಾದ ಬೇಡಿಕೆಗಳನ್ನು ಮಂಡಿಸಲಾಯಿತು.

ಪ್ರತಿಭಟನೆಯಲ್ಲಿ ಕುಂದಾಪುರ ತಾಲೂಕು ಆಟೋರಿಕ್ಷಾ, ವಾಹನ ಚಾಲಕರ ಸಂಘ (ಸಿಐಟಿಯು), ಭಾರತೀಯ ಆಟೋರಿಕ್ಷಾ ಮಜ್ದೂರ್‌ ಸಂಘ (ಬಿಎಂಎಸ್‌). ಆಟೋರಿಕ್ಷಾ, ಟ್ಯಾಕ್ಸಿ, ಮೆಟಡೋರ್‌ ಡ್ರೈವರ್ಸ್‌ ಅಸೋಸಿಯೇಶನ್‌ (ಇಂಟಕ್‌) ಹಾಗೂ ಸಮನ್ವಯ ಸಮಿತಿ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಮನವಿ ಸ್ವೀಕರಿಸಿದ ತಹಶೀಲ್ದಾರ್‌ ತಿಪ್ಪೇಸ್ವಾಮಿ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಕಳುಹಿಸಿಕೊಡುವುದಾಗಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next