Advertisement

ಕುಂದಾಪುರ : ಬಿಜೆಪಿಯಿಂದ ಬೃಹತ್‌ ರೋಡ್‌ ಶೋ

09:31 PM Apr 15, 2019 | Team Udayavani |

ಕುಂದಾಪುರ: ಲೋಕಸಭೆ ಚುನಾವಣೆಯ ಉಡುಪಿ – ಚಿಕ್ಕ ಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪರ ಮತ ಯಾಚಿಸಿ ಸೋಮವಾರ ಕುಂದಾಪುರ ಪೇಟೆಯಲ್ಲಿ ಬೃಹತ್‌ ರೋಡ್‌ ಶೋ ನಡೆಯಿತು.

Advertisement

ಬೃಹತ್‌ ಕಾಲ್ನಡಿಗೆ ಜಾಥಗೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಹಾಲಾಡಿ ಅವರು ಚಾಲನೆ ನೀಡಿದರು.

ಶಾಸ್ತಿÅ ವೃತ್ತದಿಂದ ಆರಂಭಗೊಂಡ ರೋಡ್‌ ಶೋ ಪಾರಿಜಾತ ಸರ್ಕಲ್‌ ಮೂಲಕವಾಗಿ ಹೊಸ ಬಸ್‌ ನಿಲ್ದಾಣವಾಗಿ ಮತ್ತೆ ಶಾಸ್ತಿÅ ಸರ್ಕಲ್‌ ಬಳಿ ಬಂದು ಸಮಾಪನಗೊಂಡಿತು. ಇದೇ ವೇಳೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಿಕ್ಷಾ ಚಾಲಕರ ಬಳಿ ಮತಯಾಚಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ್‌ ಶೆಟ್ಟಿ, ಪ್ರ. ಕಾರ್ಯದರ್ಶಿಗಳಾದ ಭಾಸ್ಕರ ಬಿಲ್ಲವ, ಶಂಕರ ಅಂಕದಕಟ್ಟೆ, ಕಿರಣ್‌ ಕೊಡ್ಗಿ, ಸತೀಶ್‌ ಪೂಜಾರಿ, ಸುನೀಲ್‌ ಶೆಟ್ಟಿ, ಮಂಜು ಬಿಲ್ಲವ, ಶ್ರೀಲತಾ ಸುರೇಶ್‌ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಸುಪ್ರೀತಾ ಉದಯ ಕುಲಾಲ್‌, ಜಯಶ್ರೀ ಮೊಗವೀರ, ಗುಣರತ್ನಾ, ಜ್ಯೋತಿ, ಪುರಸಭೆ ಸದಸ್ಯರು, ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next