Advertisement

Kumta: ಬೈಕ್ ಕಳ್ಳತನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

07:07 PM Dec 15, 2023 | Team Udayavani |

ಕುಮಟಾ: ಪಟ್ಟಣದ ವೈಭವ ಕಾಂಪ್ಲೆಕ್ಸ್ ಎದುರು ನಿಲ್ಲಿಸಿಟ್ಟ ಬೈಕ್‌ನ್ನು ಕಳ್ಳತನ ಆಗಿರುವ ಕುರಿತು ದಾಖಲಾಗಿದ್ದ ದೂರಿನನ್ವಯ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕುಮಟಾ ಪೋಲಿಸರು ಯಶಸ್ವಿಯಾಗಿದ್ದಾರೆ.

Advertisement

ಶಿರಸಿ ಮೂಲದ ಗಾರೆ ಕೆಲಸ ಮಾಡುತ್ತಿದ್ದ ಖಾಲಿದ್ ಶರಿಪ್ ಸಾಬ್ ಕನವಳ್ಳಿ ಬಂಧಿತ ಆರೋಪಿಯಾಗಿದ್ದು, ಈತ ಕುಮಟಾ, ಶಿರಸಿ, ಭಟ್ಕಳದಲ್ಲಿ ಕಳ್ಳತನ ಮಾಡಿದ ಒಂದು ಲಕ್ಷ ಮೌಲ್ಯದ ಮೂರು ಬೈಕ್‌ ಗಳನ್ನು ವಶಪಡಿಕೊಳ್ಳಲಾಗಿದೆ.

ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ನವೀನ ಎಸ್. ನಾಯ್ಕ, ಸಿಬ್ಬಂದಿಗಳಾದ ಗಣೇಶ ನಾಯ್ಕ, ಗುರು ನಾಯಕ ಹಾಗೂ ಪ್ರದೀಪ ನಾಯಕ,ಸಿ.ಪಿ.ಸಿ ಸಂತೋಷ ಚೆನ್ನಣ್ಣನವರ್ ಹಾಗೂ ಮಾರುತಿ ಗಾಳಿಪೂಜಿ ಇವರುಗಳ ತಂಡ ಭಾಗಿಯಾಗಿತ್ತು.

ಇದನ್ನೂ ಓದಿ: Rajya Sabha;ಕೈ ಸನ್ನೆ ಮಾಡಿದ ರಾಘವ್ ಚಡ್ಡಾಗೆ ಕ್ಲಾಸ್ ತೆಗೆದುಕೊಂಡ ಧನಕರ್!

Advertisement

Udayavani is now on Telegram. Click here to join our channel and stay updated with the latest news.

Next