Advertisement

ಇಂದು ಕುಂಭಾಶಿ ಆನೆಗುಡ್ಡೆ ಬ್ರಹ್ಮರಥೋತ್ಸವ

12:40 AM Nov 27, 2022 | Team Udayavani |

ತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ವಿನಾಯಕ ದೇಗುಲದಲ್ಲಿ ಬ್ರಹ್ಮರಥೋತ್ಸವ, ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗ ನ. 27ರಂದು ಜರಗಲಿದೆ. ದೇಗುಲವು ಸಂಪೂರ್ಣ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

Advertisement

ನ. 27ರಂದು ಪೂರ್ವಾಹ್ನ ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗ, ಬ್ರಹ್ಮರಥೋತ್ಸವ, ಅನ್ನಸಂತರ್ಪಣೆ, ಸಂಜೆ 7ಕ್ಕೆ ರಥೋತ್ಸವ, ಸುಡ್ಡಮದ್ದು ಪ್ರದರ್ಶನ, ಸುವರ್ಣ ಪಲ್ಲಕಿ ಉತ್ಸವ, ಶಯನೋತ್ಸವ ನಡೆಯಲಿದೆ.
ನ. 28ರಂದು ಪೂರ್ವಾಹ್ನ ಚೂರ್ಣೋತ್ಸವ, ಅವಭೃಥ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ ನಡೆಯಲಿದೆ.

ನ. 27ರಂದು ಸಂಜೆ ಗಂಟೆ 4.30ಕ್ಕೆ ಸಾಲಿಗ್ರಾಮದ ಸತೀಶ್‌ ದೇವಾಡಿಗ ಹಾಗೂ ಸಂಗಡಿಗರಿಂದ ಸ್ಯಾಕ್ಸೊಫೋನ್ ಮತ್ತು ರಾತ್ರಿ 9.30ರಿಂದ ಹನುಮಗಿರಿ ಶ್ರೀ ಕೋದಂಡರಾಮ ಯಕ್ಷಗಾನ ಮಂಡಳಿಯವರಿಂದ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಆಡಳಿತ ಮೊಕ್ತೇಸರ ಕೆ. ಶ್ರೀರಮಣ ಉಪಾಧ್ಯಾಯ, ಹಿರಿಯ ಮೊಕ್ತೇಸರ ಕೆ. ಸೂರ್ಯನಾರಾಯಣ ಉಪಾಧ್ಯಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next