Advertisement

ಸ್ವಗ್ರಾಮ ಪ್ರವೇಶಕ್ಕೆ ಕುಮಟಳ್ಳಿಗೆ ನಿಷೇಧ!

10:50 PM Nov 29, 2019 | Team Udayavani |

ತೆಲಸಂಗ: ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರ ಸ್ವಗ್ರಾಮ ತೆಲಸಂಗದಲ್ಲಿ ಅವರ ಪ್ರವೇಶಕ್ಕೆ ನಿಷೇಧ ಫಲಕ ಹಾಕಲಾಗಿದೆ! ಶುಕ್ರವಾರ ಬೆಳಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಗ್ರಾಮಕ್ಕೆ ಆಗಮಿಸುವ ಮುನ್ನ ಗ್ರಾಮದ ವಿವಿಧೆಡೆ ಇಂಥ ಫಲಕಗಳನ್ನು ಪ್ರದರ್ಶಿಸಲಾಗಿದೆ.

Advertisement

“ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರದಲ್ಲಿ ಹಣಕ್ಕಾಗಿ ತಮ್ಮ ಶಾಸಕ ಸ್ಥಾನವನ್ನೇ ಮಾರಾಟ ಮಾಡಿಕೊಂಡ ಅನರ್ಹರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶ ಇಲ್ಲ’ ಎಂದು ಒಂದು ಫಲಕದಲ್ಲಿ ಹೇಳಿಕೆ ಇದ್ದರೆ, ಇನ್ನೊಂದು ಫಲಕದಲ್ಲಿ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ ಹೆಗಡೆ ಭಾವಚಿತ್ರ ಹಾಕಿ, “ಪಕ್ಷಾಂತರ ಮಾಡಿದ ಅನರ್ಹ ಶಾಸಕರನ್ನು ತಮಿಳುನಾಡು, ಮಹಾರಾಷ್ಟ್ರ, ಗುಜರಾತಿನ ಜನ ಸೋಲಿಸಿದ್ದಾರೆ.

ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಅನರ್ಹ ಶಾಸಕ ಗೆದ್ದರೂ ಆ ಕ್ಷೇತ್ರದ ಮತದಾರ ತನ್ನನ್ನು ತಾನು ಹಣ-ಹೆಂಡಕ್ಕೆ ಅಡವಿಟ್ಟುಕೊಂಡಂತೆ’ ಎಂಬ ಬರಹವಿದೆ. ಫಲಕದ ವಿಷಯವನ್ನು ಪೊಲೀಸರು ಚುನಾವಣಾ ಆಯೋಗದ ಗಮನಕ್ಕೆ ತಂದ ನಂತರ ತೆರವುಗೊಳಿಸಲಾಗಿದೆ. ಫಲಕ ಹಾಕಿದವರ ವಿರುದ್ಧ ದೂರು ದಾಖಲಿಸುವಂತೆ ಚುನಾವಣಾ ಆಯೋಗ ಗ್ರಾ.ಪಂ. ಪಿಡಿಒಗೆ ಸೂಚಿಸಿದ್ದು, ಐಗಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next