Advertisement

ಬಿಜೆಪಿಯಿಂದ ಕುಮಾರಸ್ವಾಮಿಯ “ಗ್ರಾಮವಾಸ್ತವ್ಯ-ಶೂನ್ಯ ಸಾಧನೆ” ಕಿರುಹೊತ್ತಗೆ ಬಿಡುಗಡೆ

10:05 AM Jun 25, 2019 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ “ಗ್ರಾಮ ವಾಸ್ತವ್ಯ-ಶೂನ್ಯ ಸಾಧನೆ” ಎಂಬ ಕಿರುಹೊತ್ತಗೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಬಿಡುಗಡೆಗೊಳಿಸಿದರು.

Advertisement

ಕುಮಾರಸ್ವಾಮಿ ಅವರ 13 ತಿಂಗಳ ಆಡಳಿತ ಅವಧಿಯ  ವೈಫಲ್ಯಗಳ ಕುರಿತು ಸಿಎಂ ಅವರಿಗೆ  ಹತ್ತು ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರಿಸುವಂತೆ ಸವಾಲು ಹಾಕಿದರು .

ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್, ಮಾಜಿ ಸಚಿವ ಡಾ ಎ.ಬಿ. ಮಾಲಕರೆಡ್ಡಿ  ರಾಜ್ಯ ಬಿಜೆಪಿ  ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ವೈ.ವಿಜಯೇಂದ್ರ, ಶ್ರೀ ತಮ್ಮೇಶ ಗೌಡ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಎಸ್. ಶಾಂತಾರಾಮ್  ರಾಜ್ಯ ಬಿಜೆಪಿ ಸಹವಕ್ತಾರ ಎ.ಹೆಚ್. ಆನಂದ ಉಪಸ್ಥಿತರಿದ್ದರು.

ಕಿರುಹೊತ್ತಗೆಯ ಹೈಲೈಟ್ಸ್:

ಮುಖ್ಯಮಂತ್ರಿಗಳ ಕ್ಷೇತ್ರದಲ್ಲೂ ಈಡೇರದ ಭರವಸೆ: 2008ರಲ್ಲಿ ರಾಮನಗರ ಜಿಲ್ಲೆಯ ಜಟ್ಟಿದೊಡ್ಡಿ ಗ್ರಾಮದ ಲಕ್ಕಪ್ಪ ಬಿನ್ ತಿಮ್ಮಯ್ಯ ಅವರು ನಿವಾಸದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಸ್ತವ್ಯ. ಒಟ್ಟು ಮನೆ 26. ಮನೆಗೆ ಶೀಟ್ ಹಾಕಿಸಿದರೆ ಹಣ ನೀಡುವ ಭರವಸೆ ಈಡೇರಿಲ್ಲ. ಮನೆ ಮಾಲೀಕನಿಗೆ ಈವರೆಗೆ ಒಂದು ಪೈಸೆಯೂ ಸಿಕ್ಕಿಲ್ಲ.

Advertisement

ಗ್ರಾಮದ ಎಲ್ಲರಿಗೂ ಮನೆ ಕಟ್ಟಲು ಹಣ ಕೊಡುತ್ತೇನೆ, ಎಲ್ಲಾ ಮನೆಗೆ ಶೌಚಾಲಯ ನಿರ್ಮಿಸಲು ನೆರವಿನ ಭರವಸೆ ನೀಡಿದ್ದ ಸಿಎಂ.

ಒಂದೇ ಒಂದು ಮನೆ ಕಟ್ಟಿಸಲು ಸಾಲ ಕೂಡ ಕೊಟ್ಟಿಲ್ಲ, ಇಡೀ ಗ್ರಾಮದಲ್ಲಿ ಇರೋದು ಎರಡೇ ಶೌಚಾಲಯ.

2006ರಲ್ಲಿ ಕೆಆರ್ ಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದಲ್ಲಿ ಸಿಎಂ ಗ್ರಾಮವಾಸ್ತವ್ಯ:

*ಎಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ದಿನ ಸಾರ್ವಜನಿಕ ಸಮಾರಂಭ ಮಾಡಿದ ಶಾಲೆ ಬಿದ್ದು ಹೋಗಿದೆ.

*ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಇನ್ನೂ ಹಾಗೇ ಇದೆ

*ರಸ್ತೆಗಳಿಲ್ಲ, ಯಾವುದೇ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ.

2006ರಲ್ಲಿ ಬೆಳಗಾವಿ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ:

*ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿರುವ 22 ಗ್ರಾಮಗಳನ್ನು ಸ್ಥಳಾಂತರಿಸಿ ಸಂಪೂರ್ಣ ಅಭಿವೃದ್ಧಿಪಡಿಸುವುದಾಗಿ ಮುಖ್ಯಮಂತ್ರಿ ಘೋಷಿಸಿ ಹೋಗಿದ್ದರು.

*ಭರವಸೆ ನೀಡಿ ಈಗ ದಶಕಗಳೇ ಕಳೆದಿದೆ. ಈವರೆಗೂ ನಾಗನೂರು ಗ್ರಾಮದ ವಾಸಿಗಳಿಗೆ ಯಾವುದೇ ಸ್ಥಳಾಂತರದ ಭರವಸೆ ಸಿಕ್ಕಿಲ್ಲ, ಗ್ರಾಮದ ಅಭಿವೃದ್ಧಿಯೂ ಆಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next