Advertisement

ಅತಂತ್ರ ಸೃಷ್ಟಿಯಾದ್ರೆ ಮತ್ತೆ ಎಲೆಕ್ಷನ್‌ : ಕುಮಾರಸ್ವಾಮಿ ಸ್ಪಷ್ಟನೆ

02:08 AM May 22, 2017 | Karthik A |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್‌ ಅಥವಾ ಬಿಜೆಪಿ ಜತೆ ಹೊಂದಾಣಿಕೆಯ ಮಾತೇ ಇಲ್ಲ. ಅಂತಹ ಸಂದರ್ಭ ಬಂದರೆ ಮರುಚುನಾವಣೆ ತಮ್ಮ ಆಯ್ಕೆಯಾಗಿರುತ್ತದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಸ್ವಂತ ಶಕ್ತಿಯಿಂದ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ಒಂದೊಮ್ಮೆ ಅತಂತ್ರ ಫ‌ಲಿತಾಂಶ ಬಂದರೆ ಅರವಿಂದ ಕೇಜ್ರಿವಾಲ್‌ ಮಾದರಿಯಲ್ಲಿ ಮರುಚುನಾವಣೆಗೆ ಹೋಗುತ್ತೇನೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಯಾರ ಹಂಗೂ ಇಲ್ಲದೆ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಿ ನಾನು ಕಂಡ ಕನಸಿನ ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡಬೇಕಿದೆ. ಬೇರೊಂದು ಪಕ್ಷದ ಜತೆಗೂಡಿ ಸರ್ಕಾರ ರಚಿಸಿದರೆ ನಾನಂದುಕೊಂಡಂತೆ ಏನೂ ಸಾಧಿಸಲಾಗದು. ಅದಕ್ಕಿಂತ ಸುಮ್ಮನಿರುವುದೇ ಲೇಸು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next