Advertisement

Hassan; ಪ್ರೀತಂ ಗೌಡ ನನ್ನ ತಮ್ಮನಿದ್ದಂತೆ, ಚರ್ಚಿಸಿ ಸರಿ ಮಾಡೋಣ: ಎಚ್‌.ಡಿ.ಕುಮಾರಸ್ವಾಮಿ

12:17 AM Feb 13, 2024 | Team Udayavani |

ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ಅವರೇ ಸ್ಪರ್ಧಿಸಬೇಕು ಎಂಬ ಆಸೆ ಇದ್ದರೆ ಈ ಬಗ್ಗೆ ಚರ್ಚೆ ಮಾಡೋಣ. ಗೊಂದಲವನ್ನು ಕುಳಿತು ಸರಿ ಮಾಡೋಣ. ನಾವು ಅಣ್ಣ ತಮ್ಮಂದಿರಂತೆ ಮುನ್ನಡೆಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪಾಪ ಯಾರೋ ಅವನಮನಸ್ಸಿನ ಮೇಲೆ ಪ್ರಭಾವ ಬೀರಿದಂತಿದೆ. ಅವನಿಗಿನ್ನೂ ಸಣ್ಣ ಪ್ರಾಯ. ಹಾಗಾಗಿ ಬಿರುಸಿನಲ್ಲಿ ಮಾತಾಡುತ್ತಾರೆ. ಅವನು ನನ್ನ ತಮ್ಮನಂತೆ. ಕುಳಿತು ಸರಿ ಮಾಡೋಣ. ಅದೇನೂ ದೊಡ್ಡ ಸಮಸ್ಯೆ ಅಲ್ಲ ಎಂದು ನಗುತ್ತಲೇ ಹೇಳಿದರು.

ರಾಜಕಾರಣದಲ್ಲಿ ಅಣ್ಣ ತಮ್ಮ ಆಗಲು ಸಾಧ್ಯವಿಲ್ಲ: ಪ್ರೀತಂ ಗೌಡ
ನಾನು ಯುವಕನಾಗಿ ಬಿರುಸಿನಿಂದ ಮಾತನಾಡಿದ್ದರೂ ಅದರಲ್ಲಿ ಬದ್ಧತೆ ಇರುತ್ತದೆ. ನಾನೇನು ಮಾಡಬೇಕು ಎಂಬುದರ ಬಗ್ಗೆ ಬಿಜೆಪಿ ತೀರ್ಮಾನಿಸುತ್ತದೆ. ರಾಜಕಾರಣದಲ್ಲಿ ಅಣ್ಣ, ತಮ್ಮ ಆಗಲು ಸಾಧ್ಯವಿಲ್ಲ ಎಂದು ಪ್ರೀತಂ ಗೌಡ ಹೇಳಿದರು. ಅವರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ಉತ್ಸಾಹದಲ್ಲಿ ಮಾತನಾಡುವುದಿಲ್ಲ. ನನ್ನ ಕೆಲಸ ಮಾತನಾಡುತ್ತದೆ. ಜನ ನನಗೆ ಆಶೀರ್ವಾದ ಮಾಡಿದ್ದಾರೆ. ನನ್ನ ಜತೆ ಕುಳಿತು ಮಾತನಾಡುವ ಬದಲು ಅವರ ಶಾಸಕರ ಜತೆ ಮಾತನಾಡುವುದು ಒಳ್ಳೆಯದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next