Advertisement

ರಾಮನಗರದ ಆಟೋ ಚಾಲಕನ ಅಂತ್ಯಸಂಸ್ಕಾರಕ್ಕೆ ಕುಮಾರಸ್ವಾಮಿ, ನಿಖಿಲ್

10:34 AM Jan 17, 2021 | Team Udayavani |

ಬೆಂಗಳೂರು: ತನ್ನ ಅಂತ್ಯಕ್ರಿಯೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರಬೇಕೆಂದು ಪತ್ರ ಬರೆದಿಟ್ಟು ಮೃತಪಟ್ಟಿದ್ದ ರಾಮನಗರದ ಆಟೋ ಚಾಲಕ ಆರ್.ಜಯರಾಂ ಅಂತ್ಯಸಂಸ್ಕಾರಕ್ಕೆ ಕುಮಾರಸ್ವಾಮಿ ಮತ್ತು ನಿಖಿಲ್ ತೆರಳಲಿದ್ದಾರೆ.

Advertisement

ರಾಮನಗರ ಜಿಲ್ಲೆಯ ಬೊಮ್ಮಚ್ಚನ ಹಳ್ಳಿಗೆ ಇಂದು ಮಧ್ಯಾಹ್ನ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಮೃತ ಜಯರಾಂ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ.

ಗಾಂಧಿನಗರದ 4ನೇ ವಾರ್ಡಿನಲ್ಲಿ ವಾಸವಿದ್ದ ಆರ್‌. ಜಯರಾಂ (53), ಶಂಕರ್‌ನಾಗ್‌ ಆಪೆ ಆಟೋ ಸಂಘದಲ್ಲಿ ಸಕ್ರಿಯವಾಗಿದ್ದರು. ಎಡಗಾಲಿಗೆ ಗ್ಯಾಂಗ್ರಿನ್‌ ಆಗಿತ್ತು. ಶನಿವಾರ ಕೊನೆಯುಸಿರೆಳೆಯುವ ಮುನ್ನ ಅವರು ಪತ್ರವೊಂದನ್ನು ಬರೆದಿದ್ದಾರೆ.

ಇದನ್ನೂ ಓದಿ:ಚಲಿಸುತ್ತಿದ್ದ ಬಸ್ ಗೆ ವಿದ್ಯುತ್ ತಂತಿ ಸ್ಪರ್ಷ: ಆರು ಜನರ ದುರ್ಮರಣ, 19 ಜನರಿಗೆ ಗಾಯ

ತಮ್ಮ ಮರಣಾ ನಂತರ ಶವಸಂಸ್ಕಾರದಲ್ಲಿ ಕುಮಾರಸ್ವಾಮಿ ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಹಾಗೂ ತಮ್ಮ ಬುದ್ದಿ ಮಾಂದ್ಯ ಮಗನಿಗೆ ಆರ್ಥಿಕ ಸಹಾಯ ಬೇಕು, ಅವನಿಗೆ ಒಂದು ದಾರಿ ತೋರಿಸಿ ಎಂದು ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next