Advertisement

Heavy Rain ಕುಳ್ಳುಂಜೆ: ವಾರಾಹಿ ನೀರು ನುಗ್ಗಿ ಶಾಲೆ ಕಟ್ಟಡ ಕುಸಿತ

12:10 AM Jul 17, 2024 | Team Udayavani |

ಸಿದ್ದಾಪುರ: ನಿರಂತರವಾಗಿ ಸುರಿದ ಮಳೆಗೆ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಕುಳ್ಳುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾರಾಹಿ ಕಾಲುವೆಯ ನೀರು ನುಗ್ಗಿದ ಪರಿಣಾಮ ಶಾಲೆಯ ಕಟ್ಟಡ ಪಂಚಾಗದ ಕಲ್ಲು ಜಾರಿ, ಬಿರುಕು ಬಿಟ್ಟಿದೆ. ಕಾಂಪೌಂಡು ಕುಸಿದಿದೆ. ಶಾಲೆಗೆ ರಜೆ ಇದ್ದ ಕಾರಣ ಯಾವುದೇ ಹಾನಿ ಸಂಭವಿಸಿಲ್ಲ.

Advertisement

ಶಾಲೆಯ ತರಗತಿಯ ಕೋಣೆಗಳಲ್ಲಿ ಕೆಸರು ನೀರು ತುಂಬಿಕೊಂಡಿವೆ. ಪೀಠೊಪಕರಣಗಳು, ಪುಸ್ತಕಗಳು ಮತ್ತು ಇತರ ವಸ್ತುಗಳು ಒದ್ದೆಯಾಗಿವೆ.

ಸೌಡ-ಸಿದ್ದಾಪುರ ಹೆದ್ದಾರಿಯ ಹಳೇ ಮೋರಿಯನ್ನು ತೆಗೆದು ಹೊಸದಾಗಿ ಅವೈಜ್ಞಾನಿಕವಾಗಿ ಮೋರಿ ರಚನೆ ಮಾಡಿದ ಪರಿಣಾಮ ಶಾಲೆಗೆ ನೀರು ನುಗ್ಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್‌ ಶೋಭಾಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಪಿಆರ್‌ಡಿ ಎಂಜಿನಿಯರ್‌ ರಾಜಕುಮಾರ್‌, ಪಿಡಬ್ಲ್ಯೂಡಿ ಎಂಜಿನಿಯರ್‌ ರಾಘವೇಂದ್ರ ನಾಯ್ಕ, ಶಂಕರನಾರಾಯಣ ಗ್ರಾ.ಪಂ. ಅಧ್ಯಕ್ಷ ಉಮೇಶ ಶೆಟ್ಟಿ ಕಲ್ಗದ್ದೆ ಮತ್ತು ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next