Advertisement

ಜೈಪುರ, ಜೋಧಪುರ ರೈಲು ನಿಲ್ದಾಣಗಳಲ್ಲಿ ಮಣ್ಣಿನ ಕಪ್‌ನಲ್ಲಿ ಚಹಾ

09:54 AM Nov 30, 2019 | Team Udayavani |

ಹೊಸದಿಲ್ಲಿ: ಪ್ಲಾಸ್ಟಿಕ್‌, ಕಾಗದ ಕಪ್‌ ಗಳ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ರೈಲ್ವೇ ಶೀಘ್ರ ಜೈಪುರ, ಜೋಧಪುರ, ಅಜ್ಮೇರ್ ಸೇರಿದಂತೆ ಸುಮಾರು 25 ರೈಲ್ವೇ ನಿಲ್ದಾಣಗಳಲ್ಲಿನ್ನು ಚಹಾಕ್ಕೆ ಮಣ್ಣಿನ ಕಪ್‌ ಗಳನ್ನು ಪರಿಚಯಿಸಲಿದೆ. ಇದರೊಂದಿಗೆ ಆಹಾರ ವಸ್ತುಗಳನ್ನೂ ಪರಿಸರ ಸಹ್ಯ ವಸ್ತುಗಳ ಮೂಲಕ ಗ್ರಾಹಕರಿಗೆ ನೀಡಲಿದೆ.

Advertisement

25 ಪ್ರಮುಖ ನಿಲ್ದಾಣಗಳಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ರೈಲ್ವೇ ಮೂಲಗಳು ಹೇಳಿವೆ. ಮಣ್ಣಿನ ಕಪ್‌ ಗಳನ್ನು ಪರಿಚಯಿಸಲು ಈ ಮೊದಲು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮನವಿ ಮಾಡಿದ್ದರು. ಅದರಂತೆ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರು ರೈಲ್ವೇ ಮಂಡಳಿಗೆ ಸೂಚನೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ಬದಲಿಗೆ ಮಣ್ಣು, ಪಿಂಗಾಣಿ, ಗಾಜಿನ ವಸ್ತುಗಳು ಬಳಕೆಗೆ ಬರಲಿವೆ. ಈಗಾಗಲೇ ರಾಯ್‌ ಬರೇಲಿ ಮತ್ತು ವಾರಾಣಸಿ ರೈಲು ನಿಲ್ದಾಣಗಳಲ್ಲಿ ಟೆರ್ರಕೋಟಾ ಉತ್ಪನ್ನಗಳನ್ನು ಆಹಾರ ನೀಡಲು ಬಳಸಲಾಗುತ್ತಿದೆ. ದೇಶಾದ್ಯಂತ ಸುಮಾರು 400 ರೈಲ್ವೇ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್‌ ತ್ಯಜಿಸಲು ತೀರ್ಮಾನ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next