Advertisement

Kulgeri Cross; ಹೆಚ್ಚುತ್ತಿರುವ ಮಲಪ್ರಭಾ ಪ್ರವಾಹ; ಜನರ ಮನವಲಿಕೆಗೆ ಮುಂದಾದ ಅಧಿಕಾರಿಗಳು

10:29 PM Aug 02, 2024 | Team Udayavani |

ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ): ಮಲಪ್ರಭಾ ನವಿಲುತೀರ್ಥ ಜಲಾಶಯದ ಮೇಲ್ಬಾಗದಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಜೋರಾಗಿದ್ದು,ಮಲಪ್ರಭಾ ನದಿಯ ದಡದಲ್ಲಿನ ತಳಕವಾಡ, ಆಲೂರ ಎಸ್‌ಕೆ, ಕಳಸ, ಕಿತ್ತಲಿ ಗ್ರಾಮಗಳಿಗೆ ನೀರು ನುಗ್ಗಿದ್ದು ಗೋವನಕೊಪ್ಪ, ಬೀರನೂರ,ಹಾಗನೂರ, ಕರ್ಲಕೊಪ್ಪ ಸೇರಿದಂತೆ ಸುಮಾರು ಗ್ರಾಮಗಳಿಗೆ ಪ್ರವಾಹದ ನೀರು ಬರುವ ಸಾಧ್ಯತೆ ಇದೆ.

Advertisement

ಪ್ರವಾಹದ ನೀರು ಹೆಚ್ಚಿತ್ತಿರುವ ಕಾರಣ ಬಾದಾಮಿ ತಹಶೀಲ್ದಾರ್ ಜೆ ಬಿ ಮಜ್ಜಗಿ ಅವರ ಸೂಚನೆ ಮೆರೆಗೆ ಕಳಸ ಗ್ರಾಮದ ಹತ್ತಿರ ಮಲಪ್ರಭಾ ದಡದಲ್ಲಿರುವ ನಿಂಬಲಗುಂದಿ ಗ್ರಾಮದ ಹರಣಶೀಕಾರಿ ಜನಾಂಗದ 10 ಕುಟುಂಬಗಳ 50ಕ್ಕೂ ಹೆಚ್ಚು ಜನರನ್ನು ಮನವಲಿಸುವ ಮೂಲಕ ಕಂದಾಯ ನಿರೀಕ್ಷಕ ವಿ ಎ ವಿಶ್ವಕರ್ಮ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಪ್ರವಾಹದ ನೀರು ಹೆಚ್ಚುತ್ತಿರುವ ಕಾರಣ ಮುಂಜಾಗೃತ ಕ್ರಮವಾಗಿ ಸುಮಾರು ಗ್ರಾಮಗಳಲ್ಲಿನ ಜನ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಕ್ಕೆ ಧಾವಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next