Advertisement

ಕುಲಾಲ ಸಂಘ ಮೀರಾರೋಡ್‌-ವಿರಾರ್‌ : ಸಾಧಕರಿಗೆ ಸಮ್ಮಾನ

11:36 AM Nov 22, 2017 | |

ಮುಂಬಯಿ: ಕುಲಾಲ ಸಂಘ ಮುಂಬಯಿ ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ 14 ನೇ ವಾರ್ಷಿಕ ಸ್ನೇಹ ಸಮ್ಮಿಲನವು ನ. 19ರಂದು ನಲಸೋಪರ ಪಶ್ಚಿಮದ ಹೊಟೇಲ್‌ ಗ್ಯಾಲಕ್ಸಿ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕುಲಾಲ ಸಂಘ ಮುಂಬಯಿ ಇದರ ನೂತನ ಅಧ್ಯಕ್ಷ ದೇವದಾಸ್‌ ಎಲ್‌. ಕುಲಾಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ  ಕಟ್ಟಡ ಸಮಿತಿಯ ಉಪ ಕಾರ್ಯಾಧ್ಯಕ್ಷ ಡಿ. ಐ. ಮೂಲ್ಯ ಸ್ಥಳೀಯ ಸಮಿತಿಯ ಮಾಜಿ ಉಪ ಕಾರ್ಯಾಧ್ಯಕ್ಷ ಮಹಾಬಲ ಮೂಲ್ಯ, ಸ್ಥಳೀಯ ಸಮಿತಿಯ ಹಿರಿಯ ಸದಸ್ಯೆ ಜಾನಕಿ ಭುಜಂಗ ಬಂಗೇರ ಅವರನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ,ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಬಾಲ ಪ್ರತಿಭೆಗಳಾದ ಆಶಾ ಸಿ. ಮೂಲ್ಯ, ನಿಶಾ ಪಿ.

ಕುಲಾಲ್‌, ಕೃಷ್‌ಜತ್ತಿನ್‌ಅವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ನೀಡಿ ಗೌರವಿಸಲಾಯಿತು. ಜ್ಯೋತಿ ಕೋ ಆಪರೇಟಿವ್‌ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌, ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ ಮೀರಾರೋಡ್‌, ಕೇಂದ್ರ ಕಚೇರಿಯ ಉಪಾಧ್ಯಕ್ಷ ರಘು ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್‌, ಗೌರವ ಕೋಶಾಧಿಕಾರಿ ಜಯ ಎಸ್‌. ಅಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ಥಾಣೆ-ಕಸರಾ-ಕರ್ಜತ್‌ -ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಮೂಲ್ಯ, ಚರ್ಚ್‌ ಗೇಟ್‌-ದಹಿಸರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಪಿ. ಮೂಲ್ಯ, ಸಿಎಸ್‌ಟಿ-ಮುಲುಂಡ್‌ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಸುಂದರ ಮೂಲ್ಯ, ಸಂಘಟನಾ ಕಾರ್ಯಾಧ್ಯಕ್ಷ ಉಮಾನಾಥ ಮೂಲ್ಯ, ಅಮೂಲ್ಯ ಪತ್ರಿಕೆಯ ಸಂಪಾದಕ ಶಂಕರ ವೈ. ಮೂಲ್ಯ, ಗುರುವಂದನ ಭಜನಾ ಮಂಡಳಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಕುಲಾಲ್‌, ಕಾರ್ಯದರ್ಶಿ ಆದ್ಯಪಾಡಿ ವಾಮನ್‌ ಡಿ. ಮೂಲ್ಯ, ಸ್ಥಳೀಯ ಸಮಿತಿಯ ಕಾರ್ಯದರ್ಶಿ ಮೋಹನ್‌ ಬಂಜನ್‌, ಕೋಶಾಧಿಕಾರಿ ಯೋಗೇಶ್‌ ಬಂಗೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುರೇಖಾ ಆರ್‌. ಬಂಗೇರ, ಕಾರ್ಯಾಧ್ಯಕ್ಷ ರಘುನಾಥ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ಸಮಿತಿಯ ಜತೆ ಕಾರ್ಯದರ್ಶಿ ಗಳಾದ ಉಮೇಶ್‌ ಎಂ. ಬಂಗೇರ, ರಘುನಾಥ ಕರ್ಕೇರ, ಸದಸ್ಯರಾದ ಚಂದ್ರಹಾಸ ಕೆ. ಮೂಲ್ಯ, ಯಶೋಧರ ಬಂಗೇರ, ಸಿ. ರಘು ಮೂಲ್ಯ, ಸದಾನಂದ ಸಾಲ್ಯಾನ್‌ ವಿರಾರ್‌, ಲಿಂಗಪ್ಪ ಬಂಗೇರ, ಸೀತಾರಾಮ ಕುಲಾಲ್‌, ಕೃಷ್ಣ ಮೂಲ್ಯ, ಉಮೇಶ್‌ ಕೆ. ಬಂಗೇರ, ಸದಾನಂದ ಕುಮಾರ್‌ ಸಾಲ್ಯಾನ್‌, ಕೇಶವ ಮೂಲ್ಯ, ಕುಟ್ಟಿ ಕೆ. ಮೂಲ್ಯ, ಯುವ ವಿಭಾಗದ ರೋಶನ್‌ ಬಂಗೇರ, ವಿನಯ ಕರ್ಮರನ್‌, ಮಹಿಳಾ ವಿಭಾಗದ ರಸಿಕಾ ಸಿ. ಮೂಲ್ಯ, ಪ್ರೇಮಾ ಪಿ. ಕುಲಾಲ್‌, ಪ್ರಮೀಳಾ ಎಂ. ಬಂಜನ್‌, ಲತಾ ಯು. ಬಂಗೇರ ನಲಸೋಪರ, ವೇದಾವತಿ ಆರ್‌. ಕರ್ಕೇರ, ಸಾವಿತ್ರಿ ಎಸ್‌. ಬಂಗೇರ, ಸುಜಾತಾ ಆರ್‌. ಸಾಲ್ಯಾನ್‌, ತನುಜಾ ವಿ. ಬಂಗೇರ, ಸರೋಜಿನಿ ಎಸ್‌. ಸಾಲ್ಯಾನ್‌ ಭಾಯಂದರ್‌, ರೇಣುಕಾ ಎಸ್‌. ಸಾಲ್ಯಾನ್‌, ಲತಾ ಎಸ್‌. ಕುಲಾಲ್‌, ಲತಾ ವೈ. ಬಂಗೇರ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next