Advertisement

ಕುಲಾಲ ಸಂಘ ಸಿಎಸ್‌ಟಿ-ಮಾನ್‌ಖುರ್ಡ್‌ ವಾರ್ಷಿಕ ಸ್ನೇಹ ಸಮ್ಮಿಲನ

03:44 PM Nov 10, 2017 | |

ಮುಂಬಯಿ: ಕುಲಾಲ ಸಂಘ ಸಮಾಜವು ಹಿಂದಿನಿಂದಲೂ ಉದ್ಯಮಿಗಳಾಗಿ, ಸ್ವ ಉದ್ಯೋಗದಿಂದ ಜೀವನವನ್ನು ಸಾಗಿಸುತ್ತಿದ್ದರು. ತಮ್ಮ ಕುಲ ಕಸುಬಿನಲ್ಲಿ ಜೀವನದ ದಾರಿಯನ್ನು ಹಿಡಿದವರು. ಪ್ರತಿಯೊಂದು ಬಂಧುಗಳಿಗೂ ಮನೆ ಹೇಗೆ ಅಗತ್ಯವೂ ಅದೇ ರೀತಿ ಸಮಾಜಕ್ಕೂ ಒಂದು ಮನೆಯಂತೆ ಭವನದ ಅಗತ್ಯವಿದೆ. ಮಂಗಳೂರಿನ ನಮ್ಮ ಸ್ವಂತ ಜಾಗದಲ್ಲಿ ಈ ಭವ್ಯ ಭವನ ರೂಪುಗೊಳ್ಳುತ್ತಿದೆ. ಒಳ್ಳೆಯ ಕಾರ್ಯಗಳಿಗೆ ಸಮಾಜ ಬಾಂಧವರು ಸದಾ, ಸಹಕಾರ ನೀಡುತ್ತಾ ಬಂದವರು. ನಿರ್ಮಾಣ ಹಂತದಲ್ಲಿರುವ ಭವನ ಪೂರ್ಣಗೊಳ್ಳುವಲ್ಲಿ ಎಲ್ಲರೂ ಸಹಕರಿಸಬೇಕು. ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆಯಿದೆ. ಅದನ್ನು ಲೋಕಮುಖ ಪರಿಚಯಿಸುವಲ್ಲಿ ಎಲರೂ ಮುಂದಾಗಬೇಕು ಎಂದು ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌ ನುಡಿದರು.

Advertisement

ನ. 5ರಂದು ವಡಾಲದ ಎನ್‌ಕೆಇಎಸ್‌ ಶಾಲಾ ಸಭಾಂಗಣದಲ್ಲಿ ಕುಲಾಲ ಸಂಘ ಮುಂಬಯಿ  ಇದರ ಸಿಎಸ್‌ಟಿ-ಮುಲುಂಡ್‌-ಮಾನ್‌ಖುರ್ಡ್‌ ಸ್ಥಳೀಯ ಸಮಿತಿಯ 4 ನೇ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸಂಘದ ಕಾರ್ಯಕ್ರಮಗಳಲ್ಲಿ ಯುವಪೀಳಿಗೆಯನ್ನು ಆಕರ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದು ಶುಭ ಹಾರೈಸಿದರು.

ಸಮಾರಂಭವನ್ನು ಹಿಂಗಾರ ಅರಳಿಸಿ ಉದ್ಘಾಟಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ದೇವದಾಸ್‌ ಎಸ್‌. ಕುಲಾಲ್‌ ಅವರು, ಸಂಘದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಗಿದೆ. ಮುಂದಿನ ಕಾಲಾವಧಿಗೆ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಸಮಾಜ ಬಾಂಧವರ ಸಹಕಾರ ಅಗತ್ಯವಾಗಿದೆ. ಪ್ರತಿಯೊಂದು ಮನೆಯಲ್ಲೂ ಕುಲಾಲ ಭವನದ ಯೋಜನೆಗೆ 5 ಸಾವಿರ ರೂ. ನೀಡುವ ಠರಾವನ್ನು ಮಂಜೂರು ಮಾಡಲಾಗಿದೆ. ಅದರಂತೆ ಸಮಾಜ ಬಾಂಧವರೆಲ್ಲರು ಸ್ಪಂದಿಸಬೇಕು. ಸಂಸ್ಥೆಯ ಕ್ರೆಡಿಟ್‌ ಸೊಸೈಟಿಯನ್ನು ಸಹಕಾರಿ ಕ್ಷೇತ್ರದ ಬ್ಯಾಂಕಾಗಿ ಪರಿವರ್ತಿಸೋಣ ಎಂದು ನುಡಿದು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಗೌರವ ಕಾರ್ಯದರ್ಶಿ ಡಿ. ಐ. ಮೂಲ್ಯ ಅವರು ಮಾತನಾಡಿ, ಸಂಘದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. 87 ವರ್ಷಗಳಿಂದ ಸಮಾಜ ಬಾಂಧವರಿಗೆ ಸಹಕಾರ ನೀಡುತ್ತಾ ಬಂದಿದೆ. ಸಂಘದ ಬೆನ್ನೆಲುಬಾಗಿದ್ದ ಪಿ. ಕೆ. ಸಾಲ್ಯಾನ್‌ ಅವರ ಕನಸಿನಂತೆ ಮಂಗಳೂರು ಕುಲಾಲ ಭವನದ ಯೋಜನೆ ಪೂರ್ಣಗೊಳ್ಳುವಲ್ಲಿ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದು ನುಡಿದರು.

ಕಾರ್ಯದರ್ಶಿ ಜಯ ಅಂಚನ್‌ ಅವರು ಮಾತನಾಡಿ, ಈ ಸ್ಥಳೀಯ ಸಮಿತಿಯು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಯಾನ್‌ ಪರಿಸರದ ಉದ್ಯಮಿಗಳ ಸಹಕಾರ-ಪ್ರೋತ್ಸಾಹ ಕಾರಣವಾಗಿದೆ. ಕುಲಾಲ ಭವನಕ್ಕೂ, ಸಯಾನ್‌ ಪರಿಸರದ ದಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದರು.

Advertisement

ಅಮೂಲ್ಯದ ತ್ತೈಮಾಸಿಕ ಉಪ ಸಂಪಾದಕ ಶಂಕರ ವೈ. ಮೂಲ್ಯ ಮಾತನಾಡಿ, 19 ವರ್ಷಗಳಿಂದ ಸಾಹಿತ್ಯ ಲೋಕದಲ್ಲಿ ಕೃಷಿ ಮಾಡಿದ ಅಮೂಲ್ಯ ಪತ್ರಿಕೆ, ಸಮಾಜದ ಒಡನಾಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ಇನ್ನಷ್ಟು ಪ್ರಗತಿಗೊಳಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ. ಸಮಾಜದ ಬೆಳವಣಿಗೆಯಲ್ಲಿ ಪರಿವರ್ತನೆ ಆಗಬೇಕಾಗಿದೆ ಎಂದು ನುಡಿದರು.

ವೇದಿಕೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್‌, ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಪಿ. ಶೇಖರ್‌ ಮೂಲ್ಯ, ಥಾಣೆ-ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಬಿ. ಮೂಲ್ಯ, ಚರ್ಚ್‌ಗೇಟ್‌-ದಹಿಸರ್‌ ಸ್ಥಳೀಯ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಣೇಶ್‌ ಸಾಲ್ಯಾನ್‌, ಮೀರಾ-ವಿರಾರ್‌ ಸ್ಥಳೀಯ ಸಮಿತಿಯ ಗೌರವ ಕಾರ್ಯದರ್ಶಿ ಮೋಹನ್‌ ಬಂಜನ್‌, ಹಾಗೂ ಸಿಎಸ್‌ಟಿ-ಮಾನ್‌ಖುರ್ಡ್‌ ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಶೇಖರ್‌ ಬಿ. ಮೂಲ್ಯ, ಸುಂದರ ತೊಕ್ಕೊಟ್ಟು, ಸುರೇಶ್‌ ಬಂಜನ್‌, ಜಗದೀಶ್‌ ಬಂಟ್ವಾಳ, ಮಹೇಶ್‌ ಸಾಲ್ಯಾನ್‌, ಸೂರಜ್‌ ಎಸ್‌. ಹಾಂಡೆಲ್‌, ಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಇಂದಿರಾ ಆರ್‌. ಬಂಜನ್‌, ಧನಲಕ್ಷ್ಮೀ ಬಂಜನ್‌, ಮಲ್ಲಿಕಾ ಎಸ್‌. ಮೂಲ್ಯ, ಜ್ಯೋತಿ ಎಸ್‌. ಹಾಂಡೆಲ್‌, ಶಾಂತಾ ಮೂಲ್ಯ, ಪ್ರಿಯಾ ಡಿ. ಮೂಲ್ಯ ಮೊದಲಾದವರು ಉಪಸ್ಥಿತರಿದ್ದರು. ಶೇಖರ್‌ ಬಿ. ಮೂಲ್ಯ ಮತ್ತು ಮಮತಾ ಗುಜರಾನ್‌ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಲ್ಯಾಣಿ ಬಂಜನ್‌, ಗೀತಾ ಸುಂದರ್‌ ಕರ್ಮರನ್‌ ಹಾಗೂ ಮಹಾಬಲ ಮೂಲ್ಯ ದಂಪತಿಯನ್ನು ಸಮ್ಮಾನಿಸಲಾಯಿತು. ಸುರೇಶ್‌ ಕೆ. ಬಂಜನ್‌ ಕಾರ್ಯಕ್ರಮ ನಿರ್ವಹಿಸಿದರು. ದಯಾನಂದ ಮೂಲ್ಯ, ಸುಂದರ ಮೂಲ್ಯ, ಜಗದೀಶ್‌ ಬಂಟ್ವಾಳ್‌ ಅವರು ಸಮ್ಮಾನಿತರನ್ನು ಪರಿಚಯಿಸಿದರು. ದಾನಿಗಳ ಯಾದಿಯನ್ನು ಸುನೀಲ್‌ ಕುಲಾಲ್‌ ವಾಚಿಸಿದರು. ಪ್ರಾರಂಭದಲ್ಲಿ ಭಜನೆ, ನೃತ್ಯ ವೈವಿಧ್ಯ ಹಾಗೂ  ಸ್ಥಳೀಯ ಸಮಿತಿಯ ಸದಸ್ಯರಿಂದ ರುಕ್ಮಯ ಕುಲಾಲ್‌ ರಚಿಸಿದ ಕರುಣೆದ ಕಣ್ಣು ನಾಟಕ ಪ್ರದರ್ಶನಗೊಂಡಿತು.ಗೌರೀಶ್‌ ಬಂಜನ್‌, ದುರ್ಗಾಪ್ರಸಾದ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next