Advertisement

ಕುಕ್ಕೆ ಕ್ಷೇತ್ರದಲ್ಲಿ ಇನ್ನೂ ಆರಂಭವಾಗಿಲ್ಲ ಸೇವೆ!

10:55 PM Sep 10, 2020 | mahesh |

ಸುಬ್ರಹ್ಮಣ್ಯ: ರಾಜ್ಯದ್ಧ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಕ್ತರ ಆಗಮನ ಆರಂಭವಾಗಿದೆಯಾದರೂ ಸದ್ಯ ದೇವರ ದರ್ಶನಕ್ಕೆ ಮಾತ್ರ ಅವಕಾಶವಿದೆ. ಸೇವೆಗಳಿಗೆ ಸರಕಾರ ಅವಕಾಶ ನೀಡಿದರೂ ಇನ್ನೂ ಆರಂಭವಾಗಿಲ್ಲ ಎಂದು ಭಕ್ತರು ಆಕ್ಷೇಪಿಸ ಲಾರಂಭಿಸಿದ್ದಾರೆ.

Advertisement

ಕೆಲವು ಅಧಿಕಾರಿಗಳು ಕಾರಣಾಂತರ ಗಳಿಂದ ರಜೆಯಲ್ಲಿದ್ದು, ವಾರದಲ್ಲಿ ಅವರು ಕರ್ತವ್ಯಕ್ಕೆ ಆಗಮಿಸಲಿದ್ದು, ಬಳಿಕ ಸೇವೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ದೇಗುಲದ ಆಡಳಿತಾಧಿಕಾರಿಗಳಾಗಿ ರುವ ರೂಪಾ ಎಂ.ಜೆ. ತಿಳಿಸಿದ್ದಾರೆ.

ಇತರ ಕ್ಷೇತ್ರಗಳಲ್ಲಿ ನಿರ್ದಿಷ್ಟ ಸೇವೆ
ಗಳು ಆರಂಭಗೊಂಡಿರುವ ಹಿನ್ನೆಲೆ ಯಲ್ಲಿ ಕ್ಷೇತ್ರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಭೇಟಿ ನೀಡುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹಲವು ನಿರ್ಬಂಧಗಳನ್ನು ಈಗಲೂ ಪಾಲಿಸಬೇಕಿದ್ದು, ಅವುಗಳ ಅನುಷ್ಠಾನಕ್ಕೆ ಅಧಿಕಾರಿಗಳು, ಸಿಬಂದಿಯ ರಜೆಯ ಕಾರಣ ಸೇವೆಗಳ ಆರಂಭ ವಿಳಂಬವಾಗಿದೆ ಎಂದು ಅವರು ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next