Advertisement
ಬ್ಯಾಂಕು ಸಹಿತ ಇತರ ಸಂಸ್ಥೆಗಳಿಗೆ ಶನಿವಾರ ರಜಾ ದಿನವಾಗಿತ್ತು. ರವಿವಾರ ಕೂಡ ವಾರದ ರಜೆ ದಿನವಾಗಿತ್ತು. ಹೀಗಾಗಿ ಭಕ್ತರು ಕ್ಷೇತ್ರದ ಕಡೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದ್ದರು. ಶಾಲೆಗಳಿಗೆ ಬೇಸಗೆ ರಜೆ ಆರಂಭಗೊಂಡಿದ್ದು, ನಾಡಿನ ವಿವಿಧೆಡೆಯ ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
Related Articles
Advertisement
ಭಕ್ತರ ಜತೆ ಅವರನ್ನು ಕರೆದುಕೊಂಡು ಬಂದ ವಾಹನಗಳ ಸಂಖ್ಯೆಯೂ ಅಪರಿಮಿತವಾಗಿತ್ತು. ಅಕ್ಷರಾ ವಸತಿಗೃಹದ ಹಿಂಭಾಗದ ಪಾರ್ಕಿಂಗ್ ಸ್ಥಳ ಮತ್ತು ಬಿಲದ್ವಾರದ ಬಳಿ, ಸವಾರಿ ಮಂಟಪದ ಬಳಿಯಲ್ಲಿ ಪಾರ್ಕಿಂಗ್ ಸ್ಥಳಗಳು ಸಂಪೂರ್ಣ ವಾಗಿ ವಾಹನಗಳಿಂದ ತುಂಬಿ ಹೋಗಿತ್ತು. ವಾಹನದ ಸಂಖ್ಯೆಯೂ ಅಧಿಕವಾಗಿದ್ದರಿಂದ ಟ್ರಾಫಿಕ್ ಸಮಸ್ಯೆ ಕಂಡುಬಂತು.
ನಿಭಾಯಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆಸೋಮವಾರದಿಂದ ಮತ್ತೆ ಮುಂದಿನ ವಾರದ ದಿನಗಳಲ್ಲಿ ಚುನಾವಣೆ, ಇತರ ರಜೆಗಳ ದಿನಗಳು ಹೆಚ್ಚಿರುವುದರಿಂದ ಭಕ್ತರು ಈ ವಾರದಲ್ಲಿ ಇನ್ನಷ್ಟು ಸಂಖ್ಯೆಯಲ್ಲಿ ಬರುವ ಸಾಧ್ಯತೆಗಳಿವೆ. ನಿರಂತರ ರಜೆ ಇರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಯಾತ್ರಾರ್ಥಿಗಳು ಆಗಮಿಸುವ ಕಾರಣ ಅವರಿಗೆ ತಂಗಲು ಕೊಠಡಿ, ವಾಹನ ದಟ್ಟಣೆ ಇತ್ಯಾದಿ ಸಮಸ್ಯೆಗಳಾಗುತ್ತಿದ್ದು, ದೇವಸ್ಥಾನದ ಆಡಳಿತ ಮಂಡಳಿ ತಾತ್ಕಾಲಿಕ ವ್ಯವಸ್ಥೆಗಳಿಗೆ ಸಿದ್ಧತೆ ನಡೆಸಿಕೊಳ್ಳುವುದು ಮುಖ್ಯ.