Advertisement

ಕುಕ್ಕೆ: ಕಾರಿನಲ್ಲಿ ಬಂದ ತಂಡದಿಂದ ಗೋವು ಕಳ್ಳತನಕ್ಕೆ ಯತ್ನ

11:33 AM Mar 26, 2022 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕಾರಿನಲ್ಲಿ ಬಂದ ತಂಡ ಗೋವು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

Advertisement

ಮುಸುಕುಧಾರಿ ತಂಡ ಕೃತ್ಯ ಎಸಗಿದೆ. ಕುಕ್ಕೆಯ ಆಂಜನೇಯ ಗುಡಿ ಬಳಿ ಘಟನೆ ನಡೆದಿದೆ. ಮಾ.25ರಂದು ಸಿಸಿ ಕೆಮರಾ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮಲಗಿದ್ದ ಗೋವನ್ನು ಕಾರಿನಲ್ಲಿ ಬಂದ ತಂಡ ಹಿಡಿಯಲು ಯತ್ನಿಸಿದೆ. ಆದರೆ ಗೋವು ತಪ್ಪಿಸಿಕೊಂಡಿದ್ದು, ಸಿಸಿ ಕೆಮರಾದಲ್ಲಿ ಸೆರೆಯಾಗಿರುವ ಕೆಲವು ದೃಶ್ಯ ವೈರಲ್‌ ಆಗಿದೆ.

ಇದನ್ನೂ ಓದಿ:ಪಳವಳ್ಳಿ ಕಟ್ಟೆ ಬಸ್ ಅಪಘಾತ ಪ್ರಕರಣ:  ಸಾವಿನ ಸಂಖ್ಯೆ 7ಕ್ಕೆ ಏರಿಕೆ

Advertisement

ಕಳ್ಳತನಕ್ಕೆ ಯತ್ನಿಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಇಂತಹ ಕೃತ್ಯಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next