Advertisement

Crime News: ಕುಡುಮಲ್ಲಿಗೆ ಆಂಜನೇಯ ದೇವಸ್ಥಾನದಲ್ಲಿ ಕಳ್ಳತನ: 2ಲಕ್ಷ ಮೌಲ್ಯದ ವಸ್ತುಗಳು ಕಳವು

11:25 AM Aug 09, 2023 | sudhir |

ತೀರ್ಥಹಳ್ಳಿ: ಚಿಡುವ ಆಂಜನೇಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ತಡ ರಾತ್ರಿ ಕಳ್ಳರು ಭಾರೀ ಪ್ರಮಾಣದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಕುಡುಮಲ್ಲಿಗೆಯಲ್ಲಿ ನೆಡೆದಿದೆ.

Advertisement

ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಸುಮಾರು 50 ಸಾವಿರ ಇತ್ತು ಎನ್ನಲಾಗಿದೆ. ಹಾಗೆಯೇ ಬೆಳ್ಳಿ ವಸ್ತುಗಳು, ತಾಮ್ರದ ವಸ್ತುಗಳು, ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ದೇವರ ವಿಗ್ರಹ ಬಿಟ್ಟು ಮತ್ತೆಲ್ಲ ವಸ್ತು ಕಳುವು ಮಾಡಲಾಗಿದೆ. ಜಾಗಂಟೆ ಕೂಡ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಕಾರಿನಲ್ಲಿ ಬಂದು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳೀಯರು ಗಮನಿಸಿ ಮಾಳೂರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಪೊಲೀಸರು ಪರಿಶೀಲಿಸಿ, ಬೆರಳಚ್ಚು ತಜ್ಞರನ್ನು ಕರೆಸಿದ್ದಾರೆ. ಒಟ್ಟು ಸುಮಾರು 2 ಲಕ್ಷ ಬೆಲೆ ಬಾಳುವ ವಸ್ತು ಕಳುವು ಆಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: Quit India Movement ದಿನಾಚರಣೆ: ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್‌ ಪೊಲೀಸರ ವಶಕ್ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next