Advertisement

Telangana Minister ಸುರೇಖಾ ವಿರುದ್ಧ ಕೆಟಿಆರ್‌ ಮಾನಹಾನಿ ಕೇಸು

01:30 AM Oct 11, 2024 | Team Udayavani |

ಹೈದರಾಬಾದ್‌: ನಟಿ ಸಮಂತಾ ರುತ್‌ಪ್ರಭು ಹಾಗೂ ನಾಗಚೈತನ್ಯ ವಿಚ್ಛೇದನ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದ್ದ ತೆಲಂಗಾಣ ಸಚಿವೆ ಕೊಂಡ ಸುರೇಖಾ ವಿರುದ್ಧ ಬಿಆರ್‌ಎಸ್‌ ಅಧ್ಯಕ್ಷ ಕೆ.ಟಿ.ರಾಮರಾವ್‌ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ. ಈ ದಂಪತಿ ವಿಚ್ಛೇದನಕ್ಕೆ ಕೆಟಿಆರ್‌ ಅವರೇ ಕಾರಣ ಎಂದು ಸುರೇಖಾ ಈ ಹಿಂದೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ಬಳಿಕ ಸುರೇಖಾಗೆ ಕೆಟಿಆರ್‌ ಕಾನೂನು ನೋಟಿಸ್‌ ಸಹ ಕಳುಹಿಸಿ ಅವರ ಹೇಳಿಕೆಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಸುರೇಖಾ ಅವರ ಹೇಳಿಕೆಗೆ ಚಿತ್ರರಂಗದ ಅನೇಕರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿವಾದ ಹೆಚ್ಚಾಗುತ್ತಿ­ದ್ದಂತೆ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದ ಸಚಿವೆ ಸಮಂತಾಗೆ ಕ್ಷಮೆಯನ್ನೂ ಕೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next