Advertisement

ಶಿರಾಡಿ ಮೂಲಕ ಕೆಎಸ್ಸಾರ್ಟಿಸಿ ಸಂಚಾರ ಪುನರಾರಂಭ

01:26 AM Aug 14, 2019 | sudhir |

ಮಂಗಳೂರು: ಶಿರಾಡಿ ಘಾಟಿ ಮಾರ್ಗವಾಗಿ ಮಂಗಳೂರು – ಬೆಂಗಳೂರು ಹಗಲು ಮತ್ತು ರಾತ್ರಿ ಬಸ್‌ ಸಂಚಾರ ಪುನರಾರಂಭಗೊಂಡಿದೆ. ಈವರೆಗೆ ಮಂಗಳೂರಿನಿಂದ ಬೆಂಗಳೂರಿಗೆ ಶಿರಾಡಿ ಘಾಟಿ ರಸ್ತೆ ಮಾರ್ಗವಾಗಿ ಹಗಲು ಮಾತ್ರ ಬಸ್‌ ಸಂಚಾರವಿತ್ತು. ರಾತ್ರಿ ವೇಳೆ ಸಂಪಾಜೆ ಘಾಟಿ ಮಾರ್ಗವಾಗಿ ಬಸ್‌ ಸಂಚರಿಸುತ್ತಿತ್ತು. ಆದರೆ ಮಂಗಳವಾರ ರಾತ್ರಿಯಿಂದ ಬಸ್‌ಗಳು ಶಿರಾಡಿ ಮಾರ್ಗವಾಗಿ ಸಂಚರಿಸಲಿವೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ಕೆ.ಎಂ. ಆಶ್ರಫ್‌ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಂಗಳೂರು ವಿಭಾಗದಿಂದ ಪುಣೆಗೆ ಬಸ್‌ ಸಂಚಾರ ಆರಂಭಗೊಂಡಿದೆ.

Advertisement

ಮುಂಬಯಿ ಮತ್ತು ಕುಂದಾಪುರ- ಕೊಲ್ಹಾಪುರ ಬಸ್‌ ಸಂಚಾರ ಇನ್ನೂ ಆರಂಭಗೊಂಡಿಲ್ಲ. ಪುತ್ತೂರು ವಿಭಾಗದಿಂದ ಹಾಸನ ಕಡೆಗೆ ತೆರಳುವ ಎಲ್ಲ ಬಸ್‌ಗಳು ಮಂಗಳವಾರ ಹಗಲು ಮತ್ತು ರಾತ್ರಿ ವೇಳೆ ಶಿರಾಡಿ ಮೂಲಕ ತೆರಳಿವೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಎಲ್ಲ ಖಾಸಗಿ ಬಸ್‌ಗಳು ಸೋಮವಾರದಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ಸಂಚರಿಸುತ್ತಿವೆ.

ರೈಲು ಸಂಚಾರ ವ್ಯತ್ಯಯ
ಎರ್ನಾಕುಳಂನಿಂದ ಓಖಾಗೆ ಹೊರಡುವ (16338) ರೈಲು ಬುಧವಾರ ರದ್ದುಗೊಂಡಿದೆ. ಬುಧವಾರ ಪುಣೆಯಿಂದ ಎರ್ನಾಕುಲಂಗೆ ತೆರಳುವ (22150) ರೈಲು ಪನ್ವೇಲ್‌ನಿಂದ ಎರ್ನಾಕುಳಂವರೆಗೆ ಮಾತ್ರ ಸಂಚರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next