Advertisement

ಪ್ರಯಾಣಿಕರ ಟಿಕೆಟ್ ದರ ಏರಿಸಿಲ್ಲ: KSRTC ಸ್ಪಷ್ಟನೆ

04:55 PM May 20, 2020 | sudhir |

ಬಂಟ್ವಾಳ: ಲಾಕ್‌ಡೌನ್ ಸಡಿಲಿಕೆಯ ಬಳಿಕ ಕೆಎಸ್‌ಆರ್‌ಟಿಸಿ ಬಸ್ಸುಗಳು ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಆದರೆ ಯಾವುದೇ ರೀತಿಯಲ್ಲಿ ಟಿಕೆಟ್ ದರವನ್ನು ಹೆಚ್ಚಿಸಿಲ್ಲ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ.

Advertisement

ಪ್ರಸ್ತುತ ಮಂಗಳೂರು-ಪುತ್ತೂರು ನಡುವಿನ ಕೆಎಸ್‌ಟರ್‌ಟಿಸಿ ಬಿ.ಸಿ.ರೋಡು ಘಟಕದ ಬಸ್ಸಿನ ಟಿಕೆಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಿಂದೆ 42 ರೂ. ಇದ್ದ ಟಿಕೆಟ್‌ಗೆ ಹಾಲಿ 61 ರೂ. ಪಡೆಯುತ್ತಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ.

ಆದರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುವ ಪ್ರಕಾರ, ಪ್ರಯಾಣಿಕರು ಹೇಳುವ ದರ ನಿಗದಿತ ನಿಲುಗಡೆಯ ಬಸ್ಸುಗಳ ದರಗಳು. ಆದರೆ ಹಾಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಜತೆಗೆ ನಿಲುಗಡೆಯೂ ಕಡಿಮೆ ಇದ್ದು, ಹೀಗಾಗಿ ಎಕ್ಸ್ ಪ್ರೆಸ್ ದರದಲ್ಲಿ ಬಸ್ಸುಗಳನ್ನು ಓಡಿಸಲಾಗುತ್ತಿದೆ. ಹೀಗಾಗಿ ಎಕ್ಸ್‌ಪ್ರೆಸ್‌ ದರ ಹಿಂದೆ ಎಷ್ಟಿತ್ತೋ ಅಷ್ಟೇ ದರವನ್ನು ಪಡೆಯಲಾಗುತ್ತಿದೆ ಎಂದು ಬಿ.ಸಿ.ರೋಡು ಡಿಪೋ ಮ್ಯಾನೇಜರ್ ಶ್ರೀಶ ಭಟ್ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next