Advertisement

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

12:42 AM May 19, 2024 | Team Udayavani |

ನೆಲಮಂಗಲ: ಕೊಡಗಿನ ಸೋಮವಾರಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೈಓವರ್‌ನ ಮೇಲೆ ಭೀಕರವಾಗಿ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯ ಸಂಭವಿಸಿಲ್ಲ.

Advertisement

ಬಸ್‌ನಲ್ಲಿ ಏಳೆಂಟು ಜನ ಪ್ರಯಾಣಿಕರು ಮಾತ್ರ ಇದ್ದರು. ಅಡಕಮಾರನಹಳ್ಳಿಯ ಫ್ಲೈಓವರ್‌ ಮೇಲೆ ಕಾರು ಚಾಲಕ ಬ್ರೇಕ್‌ ಹಾಕಿದ ಎಂದು ಡಿವೈಡರ್‌ ಮೇಲೆ ಹತ್ತಿಸಿದ ಪರಿಣಾಮ ವೇಗದಲ್ಲಿದ್ದ ಬಸ್‌, ಫ್ಲೈಓವರ್‌ ನಡುವೆ ಖಾಲಿ ಇದ್ದ ಜಾಗದಲ್ಲಿ ಸಿಲುಕಿತ್ತು.

ಸ್ವಲ್ಪ ಯಾಮಾರಿದ್ದರೂ ಸಹ 40 ಅಡಿ ಕೆಳಗೆ ಬಸ್‌ ಬೀಳುತ್ತಿತ್ತು. ಗಾಯಗೊಂಡಿದ್ದ ಚಾಲಕ ಹಾಗೂ ಐದಾರು ಪ್ರಯಾಣಿಕರನ್ನು ತತ್‌ಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next