Advertisement

Holehonnur: ಶ್ರೀ ಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಈಶ್ವರಪ್ಪ

04:00 PM Mar 30, 2024 | Kavyashree |

ಹೊಳೆಹೊನ್ನೂರು: ಕೆ.ಎಸ್ ಈಶ್ವರಪ್ಪ ಶುಕ್ರವಾರ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಕ್ಕೆ ಭೇಟಿ ನಿಡಿದ ವೇಳೆ ದಾನವಾಡಿಯ ಬೆಟ್ಟದ ಶ್ರೀ ಗಿರಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪ್ರಸಾದ ಪಡೆದಿದ್ದಾರೆ.

Advertisement

ದಾನವಾಡಿಯ ದೇವಸ್ಥಾನಕ್ಕೆ ಭೇಟಿ ನೀಡಿದ ಈಶ್ವರಪ್ಪ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿದರು. ಪೂಜೆ ನಂತರ ಕೆಲ ಕಾಲ ದೇವಸ್ಥಾನದಲ್ಲಿ ಕುಳಿತು ವಿಶ್ರಾಂತಿ ಪಡೆಯುವಾಗ ಈಶ್ವರಪ್ಪ ಅಭಿಮಾನಿಯೊಬ್ಬರು ರಂಗನಾಥ ಸ್ವಾಮಿಗೆ ಅಪ್ಪಣೆ ಕೇಳಿದ್ದಾರೆ.

ರಂಗನಾಥ ಸ್ವಾಮಿ ತೊಡೆಯ ಮೇಲಿನ ಪ್ರಸಾದ ನೀಡಿದೆ. ಬಲತೊಡೆಯ ಮೇಲಿನ ಪ್ರಸಾದ ನೀಡಿದನ್ನು ಒಬ್ಬೊಬ್ಬರು ಒಂದೊಂದು ಅರ್ಥದಲ್ಲಿ ವಿಶ್ಲೇಷಿಸಿದರು. ಕೆಲವರು ಗಿರಿ ರಂಗನಾಥ ಸ್ವಾಮಿ ಶಿಲಾಮೂರ್ತಿ ಈಶ್ವರಪ್ಪನವರ ಸ್ಪರ್ಧೆಯ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿದೆ ಎಂದು ಹೇಳಿದರು.

ಕೆ.ಎಸ್ ಈಶ್ವರಪ್ಪ ದೇವರಲ್ಲಿ ನನ್ನ ಸ್ಪರ್ದೆ ಖಚಿತ. ಮುಂದಿಟ್ಟ ಹೆಜ್ಜೆ ಹಿಂದಿಕ್ಕುವುದಿಲ್ಲ. ಸ್ಪರ್ಧೆ ಮಾತ್ರ ನಿಶ್ಚಿತ ಎಂದು ಹೇಳಿ ಕರ್ಪೂರದಾರತಿ ಮಾಡಿದ ನಂತರ ಗಿರಿ ರಂಗನಾಥ ಸ್ವಾಮಿಯ ಎದೆ ಭಾಗದ ಪ್ರಸಾದ ನೀಡಿತ್ತು. ಅಪ್ಪಣೆಯಾಗುತ್ತಿದಂತೆ ಚಪ್ಪಾಳೆ ತಟ್ಟಿದ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next