Advertisement

ಕೆಆರ್‌ಎಸ್‌: ನಿಗೂಢ ಶಬ್ದ

11:42 PM Aug 16, 2019 | Lakshmi GovindaRaj |

ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಬಳಿ ನಿಗೂಢ ಶಬ್ದ ಶುಕ್ರವಾರ ಕೇಳಿ ಬಂದಿದೆ. ಆರರಿಂದ ಏಳು ಬಾರಿ ಸರಣಿ ಶಬ್ದಗಳು ಕೇಳಿ ಬಂದಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸುತ್ತಮುತ್ತಲಿನ ಜನರಲ್ಲಿ ಆತಂಕ ಹುಟ್ಟಿಸಿದೆ.

Advertisement

ಶುಕ್ರವಾರ ಸಂಜೆ 7.30ರ ಸಮಯದಲ್ಲಿ 6 ರಿಂದ 7 ಬಾರಿ ಸರಣಿಯಾಗಿ ಶಬ್ದ ಕೇಳಿ ಬಂದಿವೆ. ಭೂಕಂಪನದ ಅನುಭವವಾದಂತೆ ಜನರು ಬೆಚ್ಚಿ ಬಿದ್ದರು. 15 ದಿನಗಳ ಹಿಂದೆಯೂ ಇದೇ ರೀತಿ ಶಬ್ದಗಳು ಅಣೆಕಟ್ಟೆ ಬಳಿ ಕೇಳಿ ಬಂದಿದ್ದವು. ಎರಡು ವರ್ಷಗಳಿಂದ ನಿಗೂಢ ಶಬ್ದಗಳು ನಿರಂತರವಾಗಿ ಅಣೆಕಟ್ಟೆ ಸಮೀಪದಲ್ಲೇ ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next