Advertisement

ಸ್ಟಾರ್ ನಟನ ಚಿತ್ರಕ್ಕೆ ನೋ ಎಂದ ‘ಉಪ್ಪೆನ’ ಬೆಡಗಿ ಕೃತಿ ಶೆಟ್ಟಿ 

04:25 PM May 25, 2021 | Team Udayavani |

ಹೈದರಾಬಾದ್ : ‘ಉಪ್ಪೆನ’ ಸಿನಿಮಾ ಮೂಲಕ ಸಖತ್ ಫೇಮಸ್ ಪಡೆದುಕೊಂಡ ನಟಿ ಕೃತಿ ಶೆಟ್ಟಿ ಈಗ ಸಿಕ್ಕಾಪಟ್ಟೆ ಬ್ಯುಝಿಯಾಗಿದ್ದಾರೆ. ಅದು ಎಷ್ಟರ ಮಟ್ಟಿಗೆಯಂದರೆ ಸ್ಟಾರ್ ನಟರ ಸಿನಿಮಾಗಳ ಆಫರ್ ಗಳನ್ನೇ ಒಪ್ಪಿಕೊಳ್ಳದಷ್ಟು.

Advertisement

ಕೃತಿ ಟಾಲಿವುಡ್ ನಲ್ಲಿ ಮನೆ ಮಾತಾಗಿದ್ದಾರೆ. ನಟಿಸಿದ ಮೊದಲ ಚಿತ್ರವೇ ಸೂಪರ್ ಹಿಟ್ ಆಗಿದ್ದರಿಂದ ಎಲ್ಲರ ಗಮನ ತನ್ನತ್ತ ಸೆಳೆದುಕೊಂಡಿದ್ದಾರೆ. ಉಪ್ಪೆನ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದ್ದಂತೆ ಈ ಚೆಲುವೆಯ ಮನೆ ಬಾಗಿಲಿಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ಕೃತಿ, ಇದೀಗ ತೆಲುಗು ನಟ ಸಾಯಿ ಧರಮ್‌ ತೇಜ್ ಅವರ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರಂತೆ.

ಸಾಯಿ ಧರಮ್‌ ತೇಜ್ ಅವರ ಮುಂದಿನ ಚಿತ್ರವನ್ನು ಬಿವಿಎಸ್‌ಎನ್ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ತಿಕ್ ಎಂಬ ಹೊಸ ಪ್ರತಿಭೆ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾಗೆ ಚಿತ್ರಕಥೆಯನ್ನು ರಂಗಸ್ಥಳಂ ಖ್ಯಾತಿಯ ನಿರ್ದೇಶಕ ಮತ್ತು ಉಪ್ಪೆನ ಸಿನಿಮಾದ ಸಹ ನಿರ್ಮಾಪಕ ಸುಕುಮಾರ್ ಬರೆಯುತ್ತಿದ್ದಾರೆ. ಈ ಸಿನಿಮಾಗೆ ನಾಯಕಿಯಾಗುವಂತೆ ಕೃತಿಗೆ ಆಫರ್ ನೀಡಲಾಗಿತ್ತಂತೆ. ಆದರೆ, ಕೃತಿ ಈ ಆಫರ್ ರಿಜೆಕ್ಟ್ ಮಾಡಿದ್ದಾರೆ.

ಮೊದಲ ಸಿನಿಮಾವೇ ಬ್ಲಾಕ್ ಬಸ್ಟರ್ ಆಗಿದ್ದರಿಂದ ಕೃತಿ ಬಹಳ ಎಚ್ಚರಿಕೆಯಿಂದ ಮುಂದಿನ ಸಿನಿಮಾಗಳ ಒಪ್ಪಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಅದಕ್ಕಾಗಿ ಅಳೆದುತೂಗಿ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡುವುದಕ್ಕೆ ಅವರು ಮುಂದಾಗಿದ್ದಾರೆ. ಆ ಕಾರಣದಿಂದಲೇ ಸಾಯಿ ತೇಜ್ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಡೇಟ್ ಹೊಂದಾಣಿಕೆಯಾಗಿದ್ದರಿಂದ   ಈ ಚಿತ್ರಕ್ಕೆ ಅವರು ನೋ ಎಂದಿದ್ದಾರಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next